ಬೆಳಗಾವಿ: ಕಳೆದ ಪೆ೧೩ ರಿಂದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಐ ಸಿಯು ಶೂಶ್ರುಸಹಾಯಕಿಯರು ನಮ್ಮನ್ನು ಖಾಯಂ ಗೊಳಿಸಬೇಕೆಂದು ೨೦೦೦ ಸದಸ್ಯರು ಬೆಂಗಳೂರು ಪ್ರೀಡಂ ಪಾರ್ಕನಲ್ಲಿ ಮುಷ್ಕರಕ್ಕಿಳಿದಿದ್ದಾರೆ.
ಬೆಳಗಾವಿಯಿಂದ ಜಿಲ್ಲಾ ಆಸ್ಪತ್ರೆಯಿಂದ ಐಸಿಯು ಘಟಕದ ನಾಲ್ಕು ಜನ ಶೂಶ್ರುಸಹಾಯಕಿಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ನಮ್ಮ ಕೂಗು ಸರಕಾರಕ್ಕೆ ಕೇಳಿ ಬರುತ್ತಿಲ್ಲ. ಸರಕಾರದ ಇಂದಿನ ಬಜೆಟ್ ಬಗ್ಗೆ ನಮಗೆ ನಿರೀಕ್ಷೆ ಇತ್ತು. ಆದರೆ ಸರಕಾರ ನಮ್ಮ ಮನವಿ ಪುರಸ್ಕರಿಸಿಲ್ಲ, ಎಂದು ಐ ಸಿಯು ಶೂಶ್ರುಸಹಾಯಕಿಯರು ರಾಜ್ಯಾದ್ಯಂತ ನಾಳೆಯಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹಕ್ಕೆ ಕರೆ ನೀಡಿದ್ದಾರೆ.
ಹೀಗಾಗಿ ಗರ್ಭಧಾರಣೆ ಇದ್ದವರಿಗೂ ಹಾಗೂ ಅವರ ಕುಟುಂಬಕ್ಕೆ ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ.