ಬೆಳಗಾವಿಬೆಳಗಾವಿ ನಗರ

ಮೇಯರ್ ಪಟ್ಟಕ್ಕಾಗಿ ಜಿದ್ದಾ ಜಿದ್ದಿ.!  ಬೆಳಗಾವಿ ಉತ್ತರಕ್ಕೋ? ದಕ್ಷಿಣಕ್ಕೋ?

ಬೆಳಗಾವಿ : ಮಹಾನಗರ ಪಾಲಿಕೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿರುವ ಬಿಜೆಪಿಯ ಮೊದಲ ಮೇಯರ್ ಯಾರಾಗುತ್ತಾರೆ? ಮೇಯರ್ ಸ್ಥಾನ ಬೆಳಗಾವಿ ಉತ್ತರಕ್ಕೋ? ಬೆಳಗಾವಿ ದಕ್ಷಿಣಕ್ಕೋ?  ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ. 
 
ಬಿಜೆಪಿಯಲ್ಲಿ ಮೇಯರ್, ಉಪಮೇಯರ್ ಆಕಾಂಕ್ಷಿಗಳಿದ್ದರೂ ಎಲ್ಲಿಯೂ ಬಹಿರ೦ಗವಾಗಿ ತಾವು ಆಕಾಂಕ್ಷಿ ಎಂದು ಯಾರೂ ಹೇಳಿಕೆ ನೀಡಿಲ್ಲ. ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ.ಈ ಮೊದಲು ಭಾಷಾ, ಗುಂಪುಗಾರಿಕೆ ಆಧಾರದ ಮೇಲೆ ಚುನಾವಣೆ ನಡೆಯುತ್ತ ಬಂದಿತ್ತು. ಆದರೆ, ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. 
 
ಪಕ್ಷದ ನಾಯಕರು, ಶಾಸಕರ ಸೂಚನೆ ಮೇರೆಗೆ ನಗರ ಸೇವಕರು ತಮ್ಮನ್ನು ಸಮಾಜ ಸೇವೆಯಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪಕ್ಷದ ಮೂಲಗಳ ಪ್ರಕಾರ ಬೆಳಗಾವಿ ದಕ್ಷಿಣ ಕ್ಷೇತ್ರಕ್ಕೆ ಮೇಯರ್ ಸ್ಥಾನ ದೊರೆಯಲಿದ್ದು, ಉಪಮೇಯರ್ ಸ್ಥಾನ ಉತ್ತರಕ್ಕೆ ದೊರೆಯುವ ಸಾಧ್ಯತೆಗಳಿವೆ. ಪ್ರಮುಖವಾಗಿ ಮೇಯರ್ ಸ್ಥಾನಕ್ಕೆ ವಾರ್ಡ್ ನಂ.43ರ ನಗರ ಸೇವಕಿ ವಾಣಿ ವಿಲಾಸ ಜೋಶಿ ಮತ್ತು ವಾರ್ಡ್ ನಂ. 50ರ ನಗರಸೇವಕಿ ಸಾರಿಕಾ ಪಾಟೀಲ ಅವರ ಹೆಸರು ಪ್ರಮುಖವಾಗಿ ಕೇರಿ ಬರುತ್ತಿವೆ. ಇಲ್ಲಿ ವಾಣಿ ಜೋಶಿ ಅವರು ಶಾಸಕ ಅಭಯ ಪಾಟೀಲರ ರಾಜಕೀಯಬದ್ಧ ವೈರಿ ಎಂಇಎಸ್‌ ಕಿರಣ ಸಾಯಿನಾಯ್ಕ ಅವರ ಪತ್ನಿಯನ್ನು ಪರಾಭವಗೊಳಿಸಿದ್ದಾರೆ. 
ಇಲ್ಲಿ ಕಿರಣ ಸಾಯನಾಯ್ಕ ಮೇಯರ್ ಆಗಿ ಮತ್ತು ಅವರ ಪತ್ನಿ ಕೂಡ ಹಿಂದೊಮ್ಮೆ ನಗರಸೇವಕಿಯಾಗಿದ್ದವರು. ಇದರ ಜೊತೆಗೆ ಕಿರಣ ಸಾಯನಾಯ್ಕ ಅಭಯ ಪಾಟೀಲರ ವಿರುದ್ಧ ಹಿಂದೆ ನಡೆದ ವಿಧಾನಸಭೆ ಚುನಾವಣೆಗೆ ನಿ೦ತು ಹೀನಾಯವಾಗಿ ಸೋತಿದ್ದರು. ಇನ್ನು ಸಾರಿಕಾ ಪಾಟೀಲ ಬಿಜೆಪಿಯ ಹಳೆಯ ಕಾರ್ಯಕರ್ತೆ. ಹೀಗಾಗಿ ಇವರಿಬ್ಬರಲ್ಲಿ ಮೇಯರ್ ಹುದ್ದೆ ಯಾರ ಪಾಲಾಗುತ್ತದೆ ಎನ್ನುವುದು ತೀವ್ರ ಕುತೂಹಲ ಕೆರಳಿಸುವಂತೆ ಮಾಡಿದೆ.
TV24 News Desk
the authorTV24 News Desk

Leave a Reply