ಬೆಳಗಾವಿ: ಟಿಳಕವಾಡಿಯ ವೀರಸೌಧಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ನೀಡಿ ಗಾಂಧಿ ಪ್ರತಿಮೆ ಮುಂದೆ ೨ ನಿಮಿಷ ಮೌನಾಚರಣೆ ಮಾಡಿದರು.ನಾವೂ ಜನರ ಭಾವನೆ. ಪ್ರಜೆಗಳ ಧ್ವನಿಯಾಗಿ ಅವರ ನೋವನ್ನ ಎಲ್ಲರಿಗೂ ತಿಳಿಸಬೇಕು ಈ ಭ್ರಷ್ಟ ಬಿಜೆಪಿ ಆಡಳಿತವನ್ನು ಕೊನೆಗೊಳಿಸಿ,ಅಭಿವೃದ್ಧಿ ಪರ ಕಾಂಗ್ರೆಸ್ ಸರ್ಕಾರ ಸ್ಥಾಪನೆ ಮಾಡಬೇಕಾಗಿದೆ.
ಚುನಾವಣೆ ಸಂದರ್ಭದಲ್ಲಿ ಅವರು ಬರುತ್ತಾರೆ. ಹೋಗುತ್ತಾರೆ ಬೆಳಗಾವಿ ಗಡಿ ಗಲಾಟೆಯ ವಿಚಾರವಾಗಿ ನ್ಯಾಯ ಒದಗಿಸಿಕೊಡಲು ಆಗಲಿಲ್ಲ. ಮೀಸಲಾತಿ ಘೋಷಣೆ ಮಾಡಿ ಗೊಂದಲ ನಿರ್ಮಾಣ ಮಾಡಿದ್ದಾರೆ. ಕಾನೂನಿನಲ್ಲಿ ಎಲ್ಲಿ ಅವಕಾಶ ಇದೆ. ಜನರನ್ನ ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದರು.
ವಕ್ಕಲಿಗರು. ಲಿಂಗಾಯತ. ಪರಿಶಿಷ್ಟರು ಇಷ್ಟು ಮೀಸಲಾತಿ ಕೇಳುತ್ತಿದ್ದಾರೆ ಅಂತಾ ಸಿಎಂ ಹೇಳಬೇಕು. ನಮ್ಮ ಇಷ್ಟು ನ್ಯಾಯ ಸಿಕ್ಕಿದೆ ಅಂತಾ ಹೇಳೋಕೆ ಅವರ ಪಕ್ಷದ ನಾಯಕರಿಗೆ ಧೈರ್ಯ ಇಲ್ಲ. ಸ್ವಾಮೀಜಿಗಳು. ಸಮಾಜದ ಮುಖಂಡರು ನಮ್ಮಗೆ ಇಷ್ಟು ನ್ಯಾಯ ಸಿಕ್ಕಿದೆ ಎಂದು ಹೇಳಲು ಆಗುತ್ತಿಲ್ಲ. ಸಿಎಂಗೂ ಕೂಡಾ ಹೇಳಲು ಆಗುತ್ತಿಲ್ಲ ಎಂದರು.
ಮೀಸಲಾತಿ ಘೋಷಣೆ ವಿಚಾರದಲ್ಲಿ ಕಾನೂನು ತೊಡಕು ಉಂಟು ಮಾಡಲು ಎನೂ ಮಾಡಬೇಕು ಅದನ್ನ ಮಾಡುತ್ತಿದ್ದಾರೆ. ಅವರಿಗೆ ಯಾರ ಬಗ್ಗೆಯೂ ನಂಬಿಕೆ ಇಲ್ಲ. ಚರ್ಚೆ ಮಾಡಲು ಅವಕಾಶ ಇಲ್ಲ. ಅವರು ಸರ್ವ ಪಕ್ಷ ಸಭೆ ಕರೆದಿರುವುದೇ ಒಳ್ಳೆಯದಾಯ್ತು. ಬೆಳಗಾವಿ ಅಧಿವೇಶನದಲ್ಲಿ ಎನೂ ಚರ್ಚೆ ಆಗಲಿಲ್ಲ. ಎಲ್ಲಾ ವೇಸ್ಟ್ ಆಯ್ತು.
ಬೆಳಗಾವಿ ಅಧಿವೇಶನದಲ್ಲಿ ಚಿಲುಮೆ ವೋಟರ್ ಐಡಿ ಬಗ್ಗೆಯಾಗಲಿ. ಭ್ರಷ್ಟಾಚಾರದ ಬಗ್ಗೆಯಾಗಲಿ ಎನೂ ಚರ್ಚೆ ಆಗಲಿಲ್ಲ. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗಲಿಲ್ಲ. ಕಳಸಾ ಬಂಡೂರಿ ವಿಚಾರದಲ್ಲಿ ನಾವೂ ಹೋರಾಟ ಆರಂಭ ಮಾಡಿದ್ದಾರೆ. ಮೂರು ವರ್ಷ ಎನೂ ಮಾಡಿದ್ರು. ಡಬಲ್ ಇಂಜಿನ್ ಅಲ್ಲ ತ್ರೀಬಲ್ ಇಂಜೀನ ಸರ್ಕಾರ ಅಂದವರು ಯಾಕೆ ಮಾಡಲಿಲ್ಲ. ಕೇಂದ್ರ ಗೃಹ ಮಂತ್ರಿಗಳು ಇಬ್ಬರು ಸಿಎಂ ಕೂಡಿಸಿ ಮಾತನಾಡಿ ಎನೂ ಮಾಡಿದ್ರು. ಬರೀ ರಾಜಕಾರಣ. ನಮ್ಮ ನಮ್ಮ ಜನಗಳ ಬಗ್ಗೆ ಜಗಳ ತಂದಿಡಬೇಕು ಅಷ್ಟೇ ಅವರಿಗೆ ಚುನಾವಣಾ ಬಂದಾಗ ಮಾತ್ರ ಕಳಸಾ ಬಂಡೂರಿ ನೆನಪಾಗುತ್ತೆ ಅಷ್ಟೇ ಎಂದರು.
ಮೋದಿ ತಾಯಿ ವಿಧಿವಶ ಹಿನ್ನಲೆ ತಾಯಿ ತಾಯಿನೇ. ದೇಶಕ್ಕೆ ಒಳ್ಳೆಯದಾಗಲಿ. ಒಬ್ಬ ನಾಯಕರಿಗೆ ಜನ್ಮ ನೀಡಿದ್ದಾರೆ.ನಾವೂ ಬಹಳ ಗೌರವದಿಂದ ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ ಎಂದರು.