ಬೆಳಗಾವಿಬೆಳಗಾವಿ ನಗರ

 ಪಂಚಮಸಾಲಿ ಸತತ  2 ವರ್ಷದ  ಹೋರಾಟಕ್ಕೆ  ಜಯ

ಬೆಳಗಾವಿ:ಪಂಚಮಸಾಲಿ ಸಮಾಜದವರು ಕಳೆದ 2 ವರ್ಷಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಘೋಷಣೆ ಮಾಡಲಿದ್ದಾರೆ.
 ಸಂಜೆ 5 ಗಂಟೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯಲ್ಲಿ ಚರ್ಚಿಸಿದ ನಂತರ ಮುಖ್ಯಮಂತ್ರಿಗಳು ಹೊರಗೆ ಬಂದು ಮೀಸಲಾತಿ ಘೋಷಣೆ ಮಾಡಲಿದ್ದಾರೆ
ಪಂಚಮಸಾಲಿ ಹೋರಾಟ ಸಮಿತಿ ಮುಖ್ಯಮಂತ್ರಿಗಳಿಗೆ ನೀಡಿರುವ ಗಡುವು ಇಂದೇ ಮುುಕ್ತಾಯವಾಗುತ್ತಿದೆ. ಬೆಳಗಾವಿ ಅಧಿವೇಶನವೂ ಇಂದೇ ಮುಕ್ತಾಯವಾಗಿದೆ. ಮೀಸಲಾತಿ ಘೋಷಿಸದೆ ಸರಕಾರ ಬೆಳಗಾವಿಯಿಂದ ಕಾಲ್ಕೀಳುವ ಸಂಶಯ ಬಂದ ಹಿನ್ನೆಲೆಯಲ್ಲಿ ಪಂಚಮಸಾಲಿ ಮುಖಂಡರು ನಿನ್ನೆ ರಾತ್ರಿ ರಹಸ್ಯ ಸಭೆ ನಡೆಸಿದ್ದರು. ಮುಂದೆ ಗಂಭೀರ ಹೋರಾಟದ ಕುರಿತು ಚರ್ಚಿಸಿದ್ದರು.
TV24 News Desk
the authorTV24 News Desk

Leave a Reply