ಬೆಳಗಾವಿ : ಸಿಎಂ ಆಣೆ ಮಾಡಿ ಹೇಳಿದ್ರು, ಹೀಗಾಗಿ ಹೋರಾಟಗಾರರಲ್ಲಿ ನಂಬಿಕೆ ಉಂಟಾಗಿದೆ, ನಾಳೆ ಸರ್ಕಾರ ಮಾಡದಿದ್ದರೆ ಸರ್ಕಾರಕ್ಕೆ ಮುಜುಗುರ ಆಗುತ್ತೆ ಎಂದು ಇಂದು ನಗರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿಬಸವ ಜಯ ಮೃತ್ಯುಂಜಯ ಶ್ರೀಗಳು ಮಾತನಾಡಿದರು.
ಸರ್ಕಾರ ಮೀಸಲಾತಿ ಮಾಡದಿದ್ದರೆ ಮುಂದಿನ ಹಾದಿ ಕುರಿತಂತೆ, ಎರಡು ಸಲ ಮಾತುಕತೆ ಮಾಡಿದ್ದೇವೆ, ನಿನ್ನೆ ಸಂಜೆ ಸಮಾಜದ ಮುಖಂಡರು ಸಭೆ ಮಾಡಿದ್ದೇವೆ, ಸಕಾರಾತ್ಮಕವಾಗಿದ್ದೇವೆ ಸಂಜೆ ಐದು ಗಂಟೆಗೆ ಏನು ನಿರ್ಣಯ ಆಗುತ್ತೆ ಅನ್ನೋದನ್ನ ಕಾದು ನೋಡ್ತೇವೆ.
ರಮೇಶಕುಮಾರ ಹೇಳಿಕೆ ವಿಚಾರವಾಗಿ, ರಮೇಶಕುಮಾರರಿಗೆ ಉತ್ತರ ಕರ್ನಾಟಕದ ಕೆಲವಷ್ಟು ಮಂದಿನಾ ನೋಡಿದ್ದಾರೆ. ಅವರನ್ನು ನೋಡಿ ಎಲ್ಲರೂ ಶ್ರೀಮಂತರಿದ್ದಾರೆ ಅಂದುಕೊಂಡಿದ್ದಾರೆ. ನೀವೆಲ್ಲ ಪ್ರಭುದ್ದ ರಾಜಕಾರಣಿ. ನಿಮ್ಮ ಸಮುದಾಯಕ್ಕೂ ಕೇಂದ್ರ ಸರ್ಕಾರ ಮೀಸಲಾತಿ ನೀಡಿದ್ದಾರೆ.
ಆವಾಗ ನಾವು ವಿರೋಧ ಮಾಡಿಲ್ಲ. ನೀವು ವ್ಯಂಗವಾಗಿ ಮಾತನಾಡೋದನ್ನ ಸಮಾಜ ಖಂಡಿಸುತ್ತದೆ. ಅವರ ಹೇಳಿಕೆ ನಿರ್ಲಕ್ಷ ಮಾಡ್ತೇವೆ ಎಂದರು.
ಮಾದ್ಯಮಗಳಲ್ಲಿ ನೋಡಿದ್ದೇನೆ ಮೀಸಲಾತಿಗೆ ವಿಘ್ನ ಉಂಟಾಗಿದೆ ಎಂಬ ವರದಿಗಳು ಬರ್ತಿವೆ, ಕೆಲವರೂ ಕಾನೂನು ಹೋರಾಟಕ್ಕಿಳಿದ್ದಾರೆ ಎನ್ನಲಾಗ್ತಿದೆ. ನಮಗೂ ಅವರಿಗೂ ಸಂಬಂಧವಿಲ್ಲ. ನಮ್ಮ ಜೊತೆಯಲ್ಲಿ ಸಮಾಜದ ಜನತೆ ಭಗವಂತ ರೂಪದಲ್ಲಿ ಇದ್ದಾನೆ. ಸಚಿವ ಸಂಪುಟದ ಬಗ್ಗೆ ನೋಡಿಕೊಂಡು ಮುಂದಿನ ಹೋರಾಟದ ಬಗ್ಗೆ ತಿರ್ಮಾನ ಮಾಡ್ತೇವೆ. ಸಂಜೆ ಐದು ಗಂಟೆಯವರೆಗೆ ಸಂಯಮದಿಂದ ಕಾಯ್ತೇವೆ. ಸಿಎಂಗಳ ಮೇಲೆ ನಂಬಿಕೆಯಿಂದಾಗಿ ಒಂದು ವಾರಗಳ ಗಡುವು ನೀಡಲಾಗಿದೆ. ನಮ್ಮ ನಂಬಿಕೆ ಉಳಿಸಿಕೊಳ್ತಾರೆ ಎಂದರು.
ಯಾರೇ ಏನೇ ಮಾಡಲಿ ಅವರನ್ನು ನಾವು ಪ್ರಶ್ನೆ ಮಾಡಲ್ಲ. 2A ಮೀಸಲಾತಿಯಲ್ಲಿರುವ ಸಮುದಾಯಗಳಿಗೆ ನ್ಯಾಯವಾಗದಂತೆ ನಮಗೆ ಮೀಸಲಾತಿ ನೀಡಿ. ನಮ್ಮ ಗುರಿ ನಮ್ಮ ಮಕ್ಳಲ ಶಿಕ್ಷಣ ಉದ್ಯೋಗಕ್ಕಾಗಿ ಮೀಸಲಾತಿ ಬೇಕು.
ಸಂಜೆಯವರೆಗೂ ಕಾಯುತ್ತೇವೆ.ಸಮಾಜ ಬಾಂಧವರು ಬೀದಿಗೆ ಬಂದು ಕಾನೂನು ಹೋರಾಟ ಮಾಡಬೇಡಿ. ಸಾಮಾಜಿಕ ಜಾಲತಾಣಗಳಲ್ಲಿಯೂ ಆಕ್ರೋಶ ವ್ಯಕ್ತಪಡಿಸಬೇಡಿ ಎಂದು ತಿಳಿಸಿದರು