ಬೆಳಗಾವಿ: ಅಕ್ಷಯ ಪಾಟೀಲ್ ಅವರನ್ನು ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಹಾಗೂ ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ವೀಣಾ ಕಾಶಪ್ಪನವರ ಅವರು ಸನ್ಮಾನ ಮಾಡಿದ್ದಾರೆ .ಈ ಸಂದರ್ಭದಲ್ಲಿ ಮಾತನಾಡಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿವರು ಅಕ್ಷಯ ಪಾಟೀಲ ಅವರನ್ನು ನಾವು ಬಾಲ್ಯದಿಂದಲೂ ನೋಡಿದ್ದೇವೆ ನಮಗೆ ಹೆಮ್ಮೆ ಎನಿಸುತ್ತದೆ ನಾವು ದೀಕ್ಷೆಯನ್ನು ಕೊಟ್ಟ ಒಬ್ಬ ಹುಡುಗ ಇವತ್ತು ಪೈಲೆಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹುಬ್ಬಳ್ಳಿಯಿಂದ ದೆಹಲಿಯವರೆಗೆ ನಡೆದ ಇಂಡಿಗೋ ವಿಮಾನದಲ್ಲಿ ಉತ್ತರಕರ್ನಟಕ ಜವಾರಿ ಭಾಷೆಯಲ್ಲಿ ಮಾತನಾಡಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ ಎಂದು ಹೇಳಿದರು.
ನಂತರ ವೀಣಾ ಕಾಶಪ್ಪನವರ ಮಾತನಾಡುತ್ತಾ ನಮಗೆ ಹೆಮ್ಮೆ ಎನಿಸುತ್ತದೆ ಉತ್ತರ ಕರ್ನಾಟಕದ ಒಬ್ಬ ಯುವಕ ಇವತ್ತು ಪೈಲಟ್ ಆಗಿರುವುದು ಅತೀವ ಸಂತೋಷವನ್ನು ತಂದಿದೆ ಎಂದರು ಈ ಸಂದರ್ಭದಲ್ಲಿ ಮಾತನಾಡಿದ ಅಕ್ಷಯ ಪಾಟೀಲ್ ನಮ್ಮ ಕುಟುಂಬ ಹುಕ್ಕೇರಿ ಹಿರೇಮಠದ ಶಿಷ್ಯರಾಗಿ ಸೇವೆಯನ್ನು ಸಲ್ಲಿಸುತ್ತಿದೆ. ನಾನು ಮತ್ತು ನನ್ನ ಧರ್ಮಪತ್ನಿ ಪ್ರಿಯಾ ಇಂಡಿಗೋ ವಿಮಾನದಲ್ಲಿಯೇ ಸೇವೆಯನ್ನು ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.