ಬೆಳಗಾವಿಬೆಳಗಾವಿ ನಗರ

ಜೈನ್ ಸಮಾಜದ ಕ್ರಿಕೆಟ ಪಂದ್ಯಾವಳಿ ಉದ್ಘಾಟಿಸಿದ ಮುರುಘೇಂದ್ರಗೌಡ ಪಾಟೀಲ

ಬೆಳಗಾವಿ:ಜಿಮ್ ಖಾನದಲ್ಲಿ ಜೈನ್ ಸಮಾಜದ ವತಿಯಿಂದ ಆಯೋಜಿಸಲಾದ “ಜೈನ್ ಟ್ರೋಫಿ-2022” ಕ್ರಿಕೆಟ ಟೂರ್ನಿಯ ಉದ್ಘಾಟನೆಯನ್ನು ಮಾಡಲಾಯಿತು, ಜೈನ ಸಮಾಜ ಕೆಲಸದ ಒತ್ತಡದ ನಡುವೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿ ಕ್ರೀಡಾ ಸ್ಪೂರ್ತಿ ‌ಮೆರೆದಿರುವುದು ಹೆಮ್ಮೆಯ‌‌ ಸಂಗತಿ ಎಂದು ಬಿಜೆಪಿ‌ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಮುರುಘೇಂದ್ರಗೌಡ ಪಾಟೀಲ ಹೇಳಿದರು.ಶುಕ್ರವಾರ ನಗರದ ‌ಜಿಮ್ ಖಾನಾ ಮೈದಾನದಲ್ಲಿ ಜೈನ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ ಮಾಡಿ ಮಾತನಾಡಿದರು.
ಕೆಲಸದ ಒತ್ತಡದ ನಡುವೆಯೂ ಜೈನ ಸಮುದಾಯ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿ ಕ್ರೀಡಾಸ್ಪೂರ್ತಿ ಮೆರೆದಿದ್ದಾರೆ. ಎಲ್ಲರೂ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗಿಯಾಗಿ ಕ್ರೀಡಾ ಸ್ಪೂರ್ತಿ ಮೆರೆಯಿರಿ ಎಂದು‌ ಕರೆ ನೀಡಿದರು.ಈ ಸಂದರ್ಭದಲ್ಲಿ ಬಾಬು ಸಂಗೋಡಿ,  ಧನಪಾಲ್ ಹುಲ್ಲೋಳಿ,  ಚಂದ್ರಶೇಖರ ಗುರೂಜಿ,ಬಾಬುರಾಜ್ ಬಖೇಡಿ,ವರದರಾಜ ಪರಮಾಜ್ ಹಾಗೂ ಕ್ರಿಕೆಟ ಪ್ರೇಮಿಗಳು,ಜೈನ್ ಸಮಾಜದವರು ಉಪಸ್ಥಿತರಿದ್ದರು.
TV24 News Desk
the authorTV24 News Desk

Leave a Reply