ಬೆಳಗಾವಿಬೆಳಗಾವಿ ನಗರ

ನಾಳೆ ಪಂಚಮಸಾಲಿ ಹೋರಾಟಕ್ಕೆ ಜಯ ಸಿಗಲಿದೆ 

ಬೆಳಗಾವಿ: ನಾಳೆ ಪಂಚಮಸಾಲಿ ಸಮುದಾಯದ ಬೃಹತ್​ ಪ್ರತಿಭಟನೆ ಹಮ್ಮಿಕೊಂಡಿರುವ ಕುರಿತು ಸುವರ್ಣಸೌಧದಲ್ಲಿ ಮಾತನಾಡಿದ  ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಸರ್ಕಾರದ ಮೇಲೆ ವಿಶ್ವಾಸ ಇದೆ.ನಾಳೆ ಪಂಚಮಸಾಲಿ ಮೀಸಲಾತಿ ಪ್ರಕಟಣೆ ಆಗಲಿದೆ. ಗುರುವಾರ ಈ ನಿಟ್ಟಿನಲ್ಲಿ ಐತಿಹಾಸಿಕ ಘೋಷಣೆ ಆಗಲಿದೆ. ಅಷ್ಟೇ ಅಲ್ಲದೆ ಬೆಳಗಾವಿಯಲ್ಲಿ ಸ್ವಯಂಪ್ರೇರಿತವಾಗಿ ಜನ ಬಂದು ಶಕ್ತಿ ಪ್ರದರ್ಶನ ಮಾಡಲಿದ್ದಾರೆ ಎಂದರು‌.
ನಾಳೆ ಶಕ್ತಿಪ್ರದರ್ಶನ ಆಗವುದರಿಂದ, ಬೊಮ್ಮಾಯಿ‌ ಐತಿಹಾಸಿಕ ನಿರ್ಧಾರ ಮಾಡಲಿದ್ದಾರೆ. ನಾವು ಯಾರಿಗೂ ಆಹ್ವಾನ ನೀಡುತ್ತಿಲ್ಲ, 25 ಲಕ್ಷ ಜನ ಬರುತ್ತಾರೆ. ನಿರಾಣಿ ಬಂದರೆ ಅವರನ್ನು ವೇದಿಕೆ ಮೇಲೆ ಕರೆಯುವುದಿಲ್ಲ. ಅವರಿಗೆ ಕೆಳಗೆ ಕುರ್ಚಿ ಹಾಕುತ್ತೇವೆ. ಇನ್ನು ಮೀಸಲಾತಿ ಶ್ರೇಯ ಯಾರಿಗೆ ಲಭಿಸಬೇಕು ಎಂಬ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಯಾರೊಬ್ಬರಿಗೂ ಸೀಮಿತವಲ್ಲ, ಸಮುದಾಯದ ಕಟ್ಟಡೆಯ ವ್ಯಕ್ತಿಗೆ ಸೇರುತ್ತದೆ ಎಂದು ತಿಳಿಸಿದರು.
TV24 News Desk
the authorTV24 News Desk

Leave a Reply