ಬೆಳಗಾವಿಬೆಳಗಾವಿ ನಗರ

 ನಮ್ಮ ಪ್ರೆಸ್ಟಿಜ್ ವಿಷಯ ನಮಗೆ ಮಂತ್ರಿಗಿರಿ ಬೇಕೇ ಬೇಕು: ಈಶ್ವರಪ್ಪ 

ಬೆಳಗಾವಿ:  ಸಿಎಂ ಬೊಮ್ಮಾಯಿ ಇಬ್ಬರಿಗೂ ಸಚಿವ ಸ್ಥಾನ ನೀಡೋ ಭರವಸೆ ನೀಡಿದರಿಂದ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಮತ್ತು ರಮೇಶ್​ ಜಾರಕಿಹೊಳಿ ಕೊನೆಗೂ ಸದನಕ್ಕೆ ಹಾಜರಾಗಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣಸೌಧ ಬಳಿ ವರದಿಗಾರರೊಂದಿಗೆ ಮಾತನಾಡಿದ ಕೆ.ಎಸ್​.ಈಶ್ವರಪ್ಪ..
ಸಿಎಂ ಬೊಮ್ಮಾಯಿ ಮೇಲೆ ನಂಬಿಕೆ ಇಟ್ಟು ನಾನು ಮತ್ತು ರಮೇಶ್ ಜಾರಕಿಹೊಳಿ ಸದನಕ್ಕೆ ಹಾಜರಾಗುತ್ತಿದ್ದೇವೆ ಎಂದು ಹೇಳಿದರು.ಸಚಿವ ಸ್ಥಾನದ ಬಗ್ಗೆ ಸಿಎಂ ಬಳಿ ಮಾತನಾಡಿದ್ದೀವಿ. ರಮೇಶ್​ ಮತ್ತು ನನ್ನದು ಈಗಾಗಲೇ ಆಗಿದೆ. ಉಳಿದ 4 ಜನರ ಪಟ್ಟಿ ತೆಗೆದುಕೊಂಡು ಸಿಎಂ ಸೋಮವಾರದ ನಂತರ ಕೇಂದ್ರ ನಾಯಕ ಬಳಿ ಚರ್ಚೆ ನಡೆಸಲಿದ್ದಾರೆ. ಬಳಿಕ ಯಾರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂದು ಗೊತ್ತಾಗಲಿದೆ ಎಂದಿದ್ದಾರೆ.
ನಾವು ಎರಡು ದಿನ ಸದನವನ್ನ ಬಾಯ್ಕಾಟ್​ ಮಾಡಿರುವ ಉದ್ದೇಶ ಏನಂದ್ರೆ ನಮ್ಮಿಬ್ಬರಿಗೂ ಕ್ಲೀನ್​ ಚಿಟ್​ ಸಿಕ್ಕಾಗಿದೆ. ಆದ್ರೂ ಯಾಕೆ ಕ್ಯಾಬಿನೆಟ್​ಗೆ ತೆಗೆದುಕೊಂಡಿಲ್ಲ ಎಂದು ರಾಜ್ಯದ ಜನರು ಪ್ರಶ್ನೆ ಮಾಡ್ತಿದ್ದಾರೆ. ಹೀಗಾಗಿ ನಮ್ಮತ್ರ ಉತ್ತರಿರಲಿಲ್ಲ ಎಂದರು.
ನಾವೇನು ಸಚಿವರಾಗುವುದು ಹೊಸದೇನಲ್ಲ ಈಗ ಉಳಿದಿರುವುದು ೩-೪ ತಿಂಗಳು ಮಾತ್ರ ಇದು ನಮ್ಮ ಪ್ರೆಸ್ಟಿಜ್ ವಿಷಯ ನಾವು ನಮ್ಮ ಕಾರ್ಯಕರ್ತರಿಗೆ ಉತ್ತರ ಕೊಡಬೇಕಾಗುತ್ತೆ ಎಂದು ಹೇಳಿ ಸುವರ್ಣ ಸೌಧದ ಒಳಗೆ ಹೋದರು 
TV24 News Desk
the authorTV24 News Desk

Leave a Reply