ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸರಕಾರಕ್ಕೆ ಕೊಟ್ಟಿರುವ ಗಡುವು ಇಂದು ಕೊನೆಯ ದಿನವಾಗಿದೆ.
ಆದ್ದರಿಂದ ಸರಕಾರ ಇಂದು ಪಂಚಮಸಾಲಿ ಸಮುದಾಯಕ್ಕೆ ಇಂದು ಸಿಹಿ ಸುದ್ದಿ ನೀಡುತ್ತಾ ಅಥವಾ ಮೂಗಿಗೆ ತುಪ್ಪ ಸವರುತ್ತಾ ಎಂದು ಪಂಚಮಸಾಲಿ ಸಮುದಾಯದ ಕಾದು ಕುಳಿತಿದ್ದಾರೆ.
ಈ ಬಗ್ಗೆ ಹಿರೇಬಾಗೇವಾಡಿಯಲ್ಲಿ ಶಾಸಕ ಬಸನಗೌಡ ಯತ್ನಾಳ ಪ್ರತಿಕ್ರಿಯೆ ನೀಡಿದ ಅವರು, ಬಸವರಾಜ ಬೊಮ್ಮಾಯಿ ಏನರೇ ಆಟ ಆಡಿದ್ರೆ ಗಂಭೀರ ಪರಿಣಾಮ ಎದುರಿಸುತ್ತಾರೆ.ಸಿಹಿ ಸುದ್ದಿ ಕೊಡ್ತಾರೋ ಮತ್ತೆ ನಾಟಕ ಆಡ್ತಾರೋ ನೋಡೋಣ ಎಂದರು.
ಮಧ್ಯಾಹ್ನ ಕ್ಯಾಬಿನೆಟ್ ಇದೆ ನಿನ್ನೆ ವರದಿ ಸಲ್ಲಿಕೆ ಆಗಿದೆಯೋ ಇಲ್ವೋ ಗೊತ್ತಿಲ್ಲ ಇದನ್ನೇ ಮುಂದುವರಿಸಿಕೊಂಡು ಹೋಗೋ ಹುಚ್ಚು ಸಾಹಸಕ್ಕೆ ಬೊಮ್ಮಾಯಿ ಬೀಳಬಾರದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಮಧ್ಯಂತರ ವರದಿ ನೀಡಿದ್ದಾರೆ, ವರದಿ ನೀಡಿಲ್ಲ ಎಂಬ ವಿಚಾರ ಸಂಬಂಧಿಸಿದಂತೆ ಮಾತ್ನಾಡಿದ ಅವರುಬೊಮ್ಮಾಯಿಯವರಿಗೆ ಎರಡು ವರ್ಷ ಆಯ್ತು ಹೇಳಿ ಇನ್ನುಮುಂದೆ ಕಥೆ ಹೇಳಬಾರದು ಬೊಮ್ಮಾಯಿಯವರು ಇಷ್ಟು ದಿವಸ ಅವರು ಹೇಳಿದ ಹಾಗೇ ನಡೆದುಕೊಂಡಿದ್ದೇವೆ ಎಂದರು. ಬೊಮ್ಮಾಯಿ ಅವರ ಮೇಲೆ ಭರವಸೆ ಇಟ್ಟಂತಹ ಕೊನೆಯ ದಿವಸ ಇದು ಒಂದು ವೇಳೆ ಸಿಹಿ ಸುದ್ದಿ ನೀಡದಿದ್ದಲ್ಲಿಚುನಾವಣೆ ಇದೆ ಜನ ತೀರ್ಮಾನ ಮಾಡ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ