ಬೆಳಗಾವಿ: ಸೋಮವಾರದಿಂದ ಸುವರ್ಣಸೌಧದಲ್ಲಿ ಅಧಿವೇಶನ ಆರಂಭವಾಗಲಿದ್ದು, ಮೀಸಲು ಸೇರಿದಂತೆ ಹಲವು ವಿಚಾರ ಮುಂದಿಟ್ಟುಕೊಂಡು ಪ್ರತಿಭಟನೆ, ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಂಘಟನೆಗಳಿಂದ ತಯಾರಿ ನಡೆಸಿದೆ. ಪ್ರಶ್ನೆಯು https://slotogate.com/table-games/buster-blackjack/ ಆನ್ಲೈನ್ನಲ್ಲಿ ಆಟಗಳನ್ನು ಆಡಲು ಅನುಮತಿಯ ಸಮಸ್ಯೆಯನ್ನು ಸಹ ಎತ್ತಿದೆ. ಸುವರ್ಣಸೌಧದ ಸದನದಲ್ಲಿ ರಾಜಕೀಯ ಕದನ, ಹೊರಗೆ ಸಾಲು-ಸಾಲು ಧರಣಿ ನಡೆಸಲು ತಯಾರಿ ನಡೆಯುತ್ತಿದೆ. ಈಗಾಲೇ ಪ್ರತಿಭಟನೆಗೆ 62 ಸಂಘಟನೆಗಳು ಮನವಿ ಮಾಡಿವೆ. 9 ಸಂಘಟನೆಗಳಿಂದ ಕೇವಲ ಮನವಿ ಸಲ್ಲಿಸೋದಾಗಿ ಅರ್ಜಿ ಸಲ್ಲಿಸಿದ್ದು, ಬೆಳಗಾವಿಯ ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಸುವರ್ಣ ಸೌಧದ ಬಳಿ ಪ್ರತಿಭಟನೆ ಪೆಂಡಾಲ್ ನಿರ್ಮಾಣವಾಗುತ್ತಿದೆ.
ಬೆಳಗಾವಿ ನಗರ ಪೊಲೀಸರು 10 ಟೆಂಟ್ ನಿರ್ಮಾಣ ಮಾಡಿದ್ದಾರೆ. ಬೇಡಿಕೆಗೆ ಅನುಸಾರವಾಗಿ ಪ್ರತಿಭಟನೆಗೆ ದಿನಾಂಕ ನಿಗದಿ ಮಾಡಲಾಗಿದ್ದು, ಕಬ್ಬಿಗೆ ಬೆಲೆ ನಿಗದಿ ಮಾಡಲು ಆಗ್ರಹಿಸಿ ಸೋಮವಾರ ರೈತರ ಹೋರಾಟ , ನ್ಯಾ. ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹಿಸಿದ್ದಾರೆ. ಮಾದಿಗ ದಂಡೋರ ಸಮಿತಿಯಿಂದ ಡಿಸೆಂಬರ್ 21ಕ್ಕೆ ಹೋರಾಟ ನಡೆಸಲಿದ್ದಾರೆ. ಅಧಿವೇಶನ, ಪ್ರತಿಭಟನೆ ಹಿನ್ನೆಲೆಯಲ್ಲಿ ಭಾರೀ ಬಂದೋಬಸ್ತ್ ಮಾಡಲಾಗಿದೆ. ಗಡಿ ವಿವಾದದ ಲಾಭ ಪಡೆಯುವ ಸಾಧ್ಯತೆ ಹಿನ್ನೆಲೆ ಭದ್ರತೆ ಹೆಚ್ಚಳವಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಮಾಹಿತಿ ತಿಳಿಸಿದ್ದಾರೆ.