ಬಾಗಲಕೋಟೆ : ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರ್ ಬೈಪಾಸ್ ಬಳಿ ನಡೆದಿದೆ.ತಂದೆಯನ್ನೇ ಹತ್ಯೆ ಮಾಡಿ 30 ತುಂಡುಗಳನ್ನು ಜಮೀನು ಒಂದರ ನಿರುಪಯುಕ್ತ ಬೋರ್ವೆಲ್ ನಲ್ಲಿ ಹಾಕಿದ ಘಟನೆ ನಡೆದಿದೆ.
ಸಿಪಿಐ ಅಯ್ಯನಗೌಡ ಪಾಟೀಲ, ಎಸ್ಐ ಸಂಗಮೇಶ ಹೊಸಮನಿ, ಕ್ರೈಂ ಪಿಎಸ್ಐ ಕೆ.ಬಿ. ಮಾಂಗ ಅವರ ನೇತೃತ್ವದಲ್ಲಿ ತನಿಖೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ.
ಪರಶುರಾಮ ಕುಳಲಿ (54) ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಕಾರಣಕ್ಕೆ ರಾಡಿನಿಂದ ಹಲ್ಲೆ ಮಾಡಿ ತಂದೆಯನ್ನುಕೊಲೆ ಮಾಡಿ ಮಗ ವಿಠ್ಠಲ್ ಕುಳಲಿ ನಿರುಪಯುಕ್ತ ಬೋರ್ವೆಲ್ ನಲ್ಲಿ ಅಂಗಾಂಗಗಳನ್ನು ಹಾಕಿದ್ದಾನೆ ಎನ್ನುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.