ಹುಬ್ಬಳ್ಳಿ : ಉದ್ಯಮಿ ಭರತ ಮಹಾಜನ ಶೇಠ ತನ್ನ ಮಗನ ಕಿರುಕುಳ ತಾಳಲಾರದೆ 10 ಲಕ್ಷ ರೂಪಾಯಿ ಸ್ಥಳೀಯ ಸುಪಾರಿ ಕಿಲ್ಲರಗಳಿಗೆ ಕೊಲೆಗೆ ನೀಡಿದ್ದ ವಿಷಯ ಬಯಲಾದ ಮೇಲೆ ಸುಪಾರಿ ಹಂತಕರು ಕೊಲೆ ಮಾಡಿ ಶವವನ್ನು ಎಲ್ಲಿ ಹೂತು ಹಾಕಿದ್ದಾರೆ ಎಂಬುದು ಪೊಲೀಸರಿಗೆ ತೆಲೆನುವಾಗಿತ್ತು, ಕೊನೆಗೂ ಪೊಲೀಸರ ನಿರಂತರ ಕಾರ್ಯಚರಣೆಯಿಂದ ಶವ ಹೂತಾಕ್ಕಿರುವ ಜಾಗವನ್ನು ಹುಬ್ಬಳ್ಳಿ ಪೊಲೀಸರು ಪತ್ತೆ ಹಚ್ಚಿದು ನಿನ್ನೆ ಕತ್ತಲಾದ ಕಾರಣ ಶವವನ್ನು ಹೊರ ತಗೆದಿಲ್ಲ. ಇಂದು ಹೂತು ಹಾಕಿರುವ ಶವವನ್ನು ಹೊರತಗೆಯಲಿದ್ದಾರೆ.
ಹುಬ್ಬಳ್ಳಿ ನಗರವನ್ನು ಬೆಚ್ಚಿಬಿಳಿಸಿದ ಉದ್ಯಮಿ ಪುತ್ರ ಅಖಿಲ್ ಜೈನ್ ಸುಪಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಹುಬ್ಬಳ್ಳಿ – ಧಾರವಾಡ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ತಂದೆಯ ಸುಪಾರಿಯಿಂದಲೇ ಹತ್ಯೆಗೊಳಗಾಗಿದ್ದ ಮಗನ ಶವ ಹೂತಾಕ್ಕಿರುವ ಜಾಗ ಕೊನೆಗೂ ನಿನ್ನೆ ಕಲಘಟಗಿ ತಾಲೂಕಿನ ದೇವಿಕೊಪ್ಪದ ಬಳಿಯ ಗದ್ದೆಯಲ್ಲಿ ಪತ್ತೆಯಾಗಿದ್ದು ಪೊಲೀಸರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಸ್ಥಳಕ್ಕೆ ಕಾನೂನು ಸುವ್ಯವಸ್ಥೆ ಡಿಸಿಪಿ ಸಾಹಿಲ್ ಭಾಗ್ಲಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆ ಕೇಸ್ ಗೆ ಸಂಬಂಧಿಸಿದಂತೆ ತಂದೆ ಭರತ್ ಜೈನ್ ಸೇರಿ ಐವರ ವಿರುದ್ದ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿ ತಂದೆ ಭರತ್ ಜೈನ್ ಸೇರಿ ಇಬ್ಬರನ್ನು ವಶಕ್ಕೆ ಪಡೆದಿದ್ದು, ಇನ್ನೂಳಿದ ಸುಫಾರಿ ಹಂತಕರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.