ಹುಬ್ಬಳಿ: ನನ್ನ ಮಗ ಅಖಿಲ ಶೇಠ ಕಾಣೆಯಾಗಿದ್ದಾನೆ ಎಂದು ತಂದೆ ಭರತ ಮಹಾಜನ ಶೇಠ ಡಿಸೆಂಬರ 3ರಂದು ಕೇಶ್ವಾಪುರ ಪೊಲೀಸ ಠಾಣೆಗೆ ದೂರು ನೀಡಿದ್ದರು. ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರಿಗೆ ತಂದೆಯ ಮೇಲೆಯೇ ಅನುಮಾನ ಬಂದಿದೆ. ಹೀಗಾಗಿ ತಂದೆ ಭರತ ಮಹಾಜನ ಶೇಠನನ್ನು ಪೊಲೀಸ ಅಧಿಕಾರಿಗಳು ತೀವ್ರ ವಿಚಾರಣೆ ಪಡಿಸಿದ್ದರು. ಮಗನ ಹತ್ಯೆಗೆ ಸ್ಥಳೀಯ ಹಂತಕರಿಗೆ ಸುಪಾರಿ ನೀಡಿದ್ದೇನೆ ಎಂದು ಬಾಯಿಬಿಟ್ಟಿದ್ದಾನೆ.
ದುಶ್ಚಟಗಳಿಗೆ ದಾಸನಾಗಿದ್ದ ಮಗ ಅಖಿಲ್ ಜೈನ್ ಕೊಲೆಗೆ ತಂದೆ ಭರತ್ ಜೈನ್ 10 ಲಕ್ಷಕ್ಕೆ ಸುಫಾರಿ ನೀಡಿದ್ದ. ಭರತ್ ಜೈನ್ ಮಹದೇವ ನಾಲವಾಡ ಮೂಲಕ 10 ಲಕ್ಷಕ್ಕೆ ಸುಫಾರಿ ನೀಡಿದ್ದ. ನಿತ್ಯ ಕುಡಿದು ಬರುತ್ತಿದ್ದ ಅಖಿಲ್ ಜೈನ್ ಗಲಾಟೆ ಮಾಡುತ್ತಿದ್ದ ಅಲ್ಲದೆ ತಂದೆ ಭರತ್ ಗೆ ಕೊಲೆ ಬೆದರಿಕೆ ಹಾಕಿದ್ದ. ಇದರಿಂದ ಮಾನಸಿಕವಾಗಿ ನೊಂದು 10 ಲಕ್ಷಕ್ಕೆ ಸುಫಾರಿ ಕೊಟ್ಟಿದ್ದ.ಡಿಸೆಂಬರ್ 1 ರಂದು ಕೊಲೆ ಮಾಡೋ ಉದ್ದೇಶದಿಂದಲೇ ಅಖಿಲ್ ನನ್ನ ಕರೆದುಕೊಂಡು ಹೋಗಿದ್ದ. ಕಾರ್ ನಲ್ಲಿ ಅಖಿಲ್ ನನ್ನ ಕರೆದುಕೊಂಡು ಹೋಗಿದ್ದ ಭರತ್. ಭರತ್ ಜೊತೆಗೆ ಆರೋಪಿ ನಂಬರ್ 4 ರೆಹಮಾನ್ ಕೂಡಾ ಇದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಲಘಟಗಿ ಬಳಿ ಕೊಲೆ ಮಾಡಿ ಕೊಲೆ ಮುಚ್ಚಿ ಹಾಕಿದ್ದಾರೆಂದು ದೂರಿನಲ್ಲಿ ಉಲ್ಲೇಖವಾಗಿದೆ. ಸದ್ಯ ಹುಬ್ಬಳ್ಳಿ ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಉದ್ಯಮಿ ಭರತ್ ಜೈನ್ ಸೇರಿ ಐದು ಜನರ ವಿರುದ್ದ ದೂರು ದಾಖಲು. ಹುಬ್ಬಳ್ಳಿಯ ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭರತ್ ಜೈನ್,ಮಹಾದೇವ ನಾಲವಾಡ್,ಸಲೀಮ್ ಸಲಾವುದ್ದೀನ್ ,ರೆಹಮಾನ್ ಹಾಗೂ ಓರ್ವ ಅಪರಿಚಿತನ ವಿರುದ್ದ ದೂರು ದಾಖಲಾಗಿದೆ.