ಬೆಳಗಾವಿ

ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಸಾರ್ವಜನಿಕರಿಂದ ಆಕ್ರೋಶ

ಖಾನಾಪುರ: ಖಾನಾಪುರ-ಧಾರವಾಡ ಮಧ್ಯೆ ಸಂಚರಿಸುವ ಬಸ್ಸಿನ ದರವನ್ನು ಏಕಾಏಕಿ ದುಪ್ಪಟ್ಟು ವಸೂಲಿ ಮಾಡುತ್ತಿರುವ ಧಾರವಾಡ ಸಾರಿಗೆ ಘಟಕದ ಅಧಿಕಾರಿಗಳ ಮೇಲೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ
 ಖಾನಾಪುರದಿಂದ ಧಾರವಾಡಕ್ಕೆ ಎಪ್ಪತ್ತೊಂದು ಕಿಮೀ ಪ್ರಯಾಣಕ್ಕೆ ಸಾಧಾರಣ ಬಸ್ಸಿನ ದರ ಒಬ್ಬರಿಗೆ 48 ರೂ ಇದ್ದು ಆದರೆ ಕಳೆದ ಎರಡು ಮೂರು ದಿನಗಳಿಂದ ಏಕಾಏಕಿ ನಿಯಮ ಮೀರಿ ದುಪ್ಪಟ್ಟು ಹಣ ಅಂದರೆ 80 ರೂ ವಸೂಲಿ ಮಾಡುತ್ತಿದ್ದು ಇದರಿಂದ ಪ್ರಯಾಣಿಕರು ಹೈರಾಣಾಗಿದ್ದಾರೆ ಅಲ್ಲದೆ ಟಿಕೆಟಿನಲ್ಲಿ ವೇಗದೂತ ಅಂತ ಇದ್ದರೂ ಬಸ್ಸು ಎಲ್ಲ ಕಡೆ ನಿಲುಗಡೆ ಆಗುತ್ತದೆ ಹಾಗಿದ್ದರೂ ದುಪ್ಪಟ್ಟು ದರ ಯಾಕೆ ವಸೂಲಿ ಮಾಡುತ್ತೀರಿ ಎಂದು ಪ್ರಯಾಣಿಕರ ಪ್ರಶ್ನೆಯಾಗಿದೆ.
ಸಾರಿಗೆ ಬಸ್ಸಿನಲ್ಲಿ ಸಾಮಾನ್ಯವಾಗಿ ಸಾಮಾನ್ಯ ವರ್ಗದವರೇ ಸಂಚರಿಸುತ್ತಾರೆ,
 ಕೊರೊನಾದಿಂದ ಜನ ಸಾಕಷ್ಟು ಆರ್ಥಿಕವಾಗಿ ಕುಗ್ಗಿದ್ದು ಜನರಿಗೆ ಈ ಸಂದರ್ಭದಲ್ಲಿ ಈ ತರಹ ಬೇಕಾಬಿಟ್ಟಿ ದರ ಹೆಚ್ಚಿಸಿರುವದು ಖಂಡನೀಯ ಎಂದು ರಾಜು ಖಾತೇದಾರ ತಾಲ್ಲೂಕಾ ಅಧ್ಯಕ್ಷರು ಗಡಿನಾಡು ಹಿತರಕ್ಷಣಾ ವೇದಿಕೆ ಖಾನಾಪುರ  ಇವರು ವಿಷಾದ ವ್ಯಕ್ತಪಡಿಸಿದ್ದಾರೆ.
TV24 News Desk
the authorTV24 News Desk

Leave a Reply