ಬೆಳಗಾವಿಬೆಳಗಾವಿ ನಗರ

 ಅನಿಲ ಪಾಟೀಲ ಮಡಲಿಗೆ ರಾಜ್ಯಮಟ್ಟದ “ಸಹಕಾರ ರತ್ನ”  ಪ್ರಶಸ್ತಿ 

ಬೆಳಗಾವಿ: ಬೆಳಗಾವಿಯ ಆಟೋ ನಗರದಲ್ಲಿರುವ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಪ್ರಾಂತೀಯ ಕಚೇರಿಯ ಕೆ.ಎಚ್.ಪಾಟೀಲ್ ಸಭಾಂಗಣದಲ್ಲಿ ಬುಧವಾರ ಅಖಿಲ ಭಾರತ ಸಹಕಾರ ಸಪ್ತಾಹ-2022ರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ವೇದಿಕೆ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ ಸಹಕಾರಿ ಸಂಸ್ಥೆಯನ್ನು ನಡೆಸುವ ಸಿಬ್ಬಂದಿ ವರ್ಗ, ಆಡಳಿತ ವರ್ಗ ಹಾಗೂ ಅದರ ಲಾಭ ಪಡೆಯುವ ಸದಸ್ಯರು ಈ ಮೂವರ ಪೂರ್ಣ ಪ್ರಮಾಣ ಇದ್ದರೆ ಮಾತ್ರ ಸಹಕಾರಿ ಸಂಸ್ಥೆಗಳು ಮುಂದುವರಿಯಲು ಸಾಧ್ಯ ಎಂದು ಹೇಳಿದರು. ಇದೆ   ಸಂದರ್ಭದಲ್ಲಿ  ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ  ಪ್ಯಾಟ್ಸನ್ ಚೀಟ್ಸ್  ಸಂಸ್ಥೆಯ  ಸಂಸ್ಥಾಪಕ ಅಧ್ಯಕ್ಷರಾದ  ಅನಿಲ ಪಾಟೀಲ ಅವರಿಗೆ  ರಾಜ್ಯ ಮಟ್ಟದ ಉನ್ನತ ಪ್ರಶಸ್ತಿ ” ಸಹಕಾರ ರತ್ನ ”  ಪ್ರಶಸ್ತಿ ನೀಡಿ ಗೌರವಿಸಲಾಯಿತು, ಅವರ ಜೊತೆಗೆ ಇನ್ನು ನಾಲ್ಕು ಜನ ಗಣ್ಯರಿಗೆ  ಸತ್ಕರಿಸಿ  ಸನ್ಮಾನಿಸಲಾಯಿತು.  ಈ ಕಾರ್ಯಕ್ರಮದಲ್ಲಿ ಸಂಸದೆ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ಎಂಎಲ್ಸಿ ಪ್ರಕಾಶ ಹುಕ್ಕೇರಿ, ಉತ್ತರ ಶಾಸಕ ಅನಿಲ್ ಬೆನಕೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ತುಬಾಕಿ, ಬಿ.ಟಿ.ಪಾಟೀಲ್, ಜಗದೀಶ ಕವಟಗಿಮಠ, ಬಿ.ಎಸ್‌.ಪರಮಶಿವಯ್ಯ, ಬಾಪುಗೌಡ ಪಾಟೀಲ್, ಬಸವರಾಜ ಸುಲ್ತಾನಪುರೆ ಸೇರಿದಂತೆ ಇನ್ನಿತರ ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
TV24 News Desk
the authorTV24 News Desk

Leave a Reply