ಬೆಳಗಾವಿ

ಅಪರೇಷನ್ ಮೊಸಳೆ: ಅರಣ್ಯ ಇಲಾಖೆಯ ಭರ್ಜರಿ ಕಾರ್ಯಾಚರಣೆ  

ಅಥಣಿ : ಹಲವು  ದಿನಗಳಿಂದ  ಕಣ್ಣು ಮುಚ್ಚಾಲೆ ಆಟವಾಡುತ್ತಿದ್ದ ಮೊಸಳೆಯನ್ನು ಹಿಡಿಯುವಲ್ಲಿ ಕಾಗವಾಡ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

 ಕಾಗವಾಡ ಪಟ್ಟಣದ ಹೊರವಲಯದಲ್ಲಿರುವ ರಾಜು ವಡ್ಡರ ಕಲ್ಲಿನ ಕ್ವಾರಿಯಲ್ಲಿ ನೀರು ನಿಂತಿದ್ದು ಅಲ್ಲೆ ಅನೇಕ ದಿನಗಳ ಕಾಲ ಮೊಸಳೆ ವಾಸವಾಗಿತ್ತು. ಈ ಹಿಂದೆ ಅಲ್ಲಿ ಅತೀ ಹೆಚ್ಚು ನೀರು ಇದ್ದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆಯನ್ನು ಹಿಡಿಯುವಲ್ಲಿ ವಿಫಲವಾಗಿದ್ದರು. ಆದರೆ ಈ ಬಾರಿ ಸತತ ಪಯತ್ನಪಟ್ಟು ಸುಮಾರು ನಾಲ್ಕು ಗಂಟೆಗಳ ಕಾಲ ನೀರನ್ನು ಮೂರು ಮೋಟರ್ ಮೂಲಕ ಹೊರತೆಗೆದು ಮೊಸಳೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ವಲಯ ಅರಣ್ಯಾಧಿಕಾರಿಯಾದ ಪ್ರಶಾಂತ ಗಾಣಿಗೇರ ಮಾತನಾಡಿ, ಈ ವಲಯದಲ್ಲಿ ಬಹುದಿನಗಳಿಂದ ಮೊಸಳೆಯು ವಾಸವಿದ್ದು ಹೊರ ಬಂದಾಗ ಪ್ರತ್ತಕ್ಷದರ್ಶಿಗಳು ನಮಗೆ ಕರೆ ಮಾಡಿ ಮಾಹಿತಿ ನೀಡಿದ್ದರು, ಆದರೆ ಆ ಕೆರೆಯ ನೀರಿನ ಮಟ್ಟ ಹೆಚ್ಚಿದ್ದರಿಂದ ಕಾರ್ಯಾಚರಣೆಗೆ ಅಡೆತಡೆಯಾಗುತ್ತಿತ್ತು.ಇವತ್ತು ನಮ್ಮ ತಂಡ ಅಲ್ಲಿಯ ನೀರನ್ನು ಹೊರಹಾಕಿ ಆ ಮೊಸಳೆಯನ್ನು ಹಿಡಿದು ಸುರಕ್ಷಿತ ಸ್ಥಳದಲ್ಲಿ ಬಿಡಲಾಯಿತು. ಇದರಿಂದ ಅನೇಕರು ಮೊಸಳೆ ಭಯದಿಂದ ಮುಕ್ತರಾಗಿದ್ದಾರೆ ಎಂದರು.

ಈ ವೇಳೆ ಉಪವಲಯಾಧಿಕಾರಿ ಪ್ರಶಾಂತ ಗಂಗಧರ,ಹಾಗೂ ಸಿಬ್ಬಂದಿಗಳು,ರಾಜಾಗೌಡ ಪಾಟೀಲ್,ಕಾಕಾ ಪಾಟೀಲ್, ಸಿದ್ದು ಒಡೆಯರ, ರಾಜು ವಡ್ಡರ,ಗಣೇಶ್ ಕೊಳೆಕರ ಸೇರಿದಂತೆ ಇತರರು ಇದ್ದರು

TV24 News Desk
the authorTV24 News Desk

Leave a Reply