ಬೆಳಗಾವಿಬೆಳಗಾವಿ ನಗರ

ನಮ್ಮ ಶಿಕ್ಷಕರನ್ನು ಬದಲಾಯಿಸಬೇಡಿ ಡಿಸಿಗೆ ವಿದ್ಯಾರ್ಥಿಗಳ ಮನವಿ

ಬೆಳಗಾವಿ: ನಮ್ಮ ಶಿಕ್ಷಕರನ್ನು ಬದಲಾಯಿಬೇಡಿ ಎಂದು   ಆಗ್ರಹಿಸಿ ಬೆಳಗಾವಿಯ ಪಂಡಿತ ನೆಹರು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
 ಇಂದು ಬೆಳಗಾವಿಯ ಜಿಲ್ಲಾಧಿಕಾರಿ  ಕಚೇರಿಗೆ ಆಗಮಿಸಿದ ಶಾಹಪುರದ ಅಳ್ವಾನ ಗಲ್ಲಿಯ ಪಂಡಿತ ನೆಹರು ಪದವಿ ಪೂರ್ವ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಧರಣಿ ನಡೆಸಿದರು.  ಈ ಕಾಲೇಜಿನಲ್ಲಿ ಕಾಮರ್ಸ ವಿಭಾಗದಲ್ಲಿ ಅಕೌಂಟ್ ಮತ್ತು ಬ್ಯುಜಿನೆಸ್ ಸ್ಟಡಿ ಕಲಿಸುತ್ತಿದ್ದ ಅತಿಥಿ ಶಿಕ್ಷಕರಾದ ಧನಶ್ರೀ ಗಾರಡೆ ಅವರ ಸ್ಥಾನಕ್ಕೆ ಬೇರೆ ಶಿಕ್ಷಕರನ್ನು ಖಾಯಂ ಆಗಿ ಸರ್ಕಾರ ನಿಯೋಜನೆ ಮಾಡಿದೆ. ಇದು ಸಧ್ಯ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ನಮಗೆ ಬೇರೇ ಏನೂ ಬೇಡ. ಮೊದಲಿದ್ದ ಶಿಕ್ಷಕರನ್ನೇ ನಿಯೋಜನೆ ಮಾಡಿ ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳು ನಮಗೆ ಅನ್ಯಾಯವಾಗಿದೆ ನಮಗೆ ಮತ್ತೆ ಏನೂ ಬೇಡ. ನಾಲ್ಕೈದು ವರ್ಷದಿಂದ ಅವರು ಒಳ್ಳೆಯ ರೀತಿ ಕಲಿಸುತ್ತಿದ್ದರು.  ಯಾರಾದ್ರೂ ಕಾಲೇಜಿಗೆ ಬರದಿದ್ದರೆ ಅವರೇ ಮನೆಗೆ ಹೋಗಿ ಕಾಲೇಜಿಗೆ ಕರೆದುಕೊಂಡು ಬರುತ್ತಿದ್ದರು. ಅಷ್ಟೊಂದು ನಮ್ಮೆಲ್ಲರನ್ನು ಪ್ರೀತಿ ಮಾಡುತ್ತಿದ್ದರು. ಇಂತಹ ಶಿಕ್ಷಕರನ್ನು ಬದಲಾವಣೆ ಮಾಡಿದ್ರೆ ಹೇಗೆ ಎಂದು ತಮ್ಮ ಅಳಲು ತೋಡಿಕೊಂಡರು.ಪ್ರತಿಭಟನೆಯಲ್ಲಿ ಶ್ರೇಯಸ್ಸ ಕುಂಡೇಕರ್, ವಾಟಿಕಾ ಖನ್ನೂಕರ್, ವೈಷ್ಣವಿ ಬೆನ್ನಾಳ್ಕರ್, ಸ್ಮೀತಾ ಪಾಟೀಲ್, ಆವಂತಿಕಾ ಝಂಗರೂಚೆ ಸೇರಿ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
TV24 News Desk
the authorTV24 News Desk

Leave a Reply