


ಬೆಳಗಾವಿ:
ಧರ್ಮಸ್ಥಳದಲ್ಲಿ ಮೃತರ ಅವಶೇಷ ಹೊರೆ ತೆಗೆಯುವ ಕಾರ್ಯದ ಕುರಿತು ಬೆಳಗಾವಿಯಲ್ಲಿ ಸಂಸದ ಜಗದೀಶ ಶೆಟ್ಟರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಎಸ್ ಐ ಟಿ ತನಿಖೆ ನಡೆಯುತ್ತಿದೆ
ಅನಾಮಿಕ ಹೇಳಿಕೆ ಮೇಲೆ ಅಸ್ಥಿಪಂಜರ ಹೊರ ತೆಗೆಯುತ್ತಿದ್ದಾರೆ ಈಗ ತನಿಖೆ ನಡೆಯುತ್ತಿದೆ ಮೃತರು ಯಾರು ಹೇಗೆ ಮೃತಪಟ್ಟರು ಎನ್ನುವುದು ಗೊತ್ತಾಗಬೇಕು ನಿಷ್ಪಕ್ಷಪಾತವಾಗಿ ತನಿಖೆ ಆಗಿ, ಕ್ರಮ ಕೈಗೊಳ್ಳಲಿ.
ಈ ವೇಳೆಯಲ್ಲಿ ಯಾವುದೇ ಧರ್ಮ ಪೀಠಗಳ ಅಪಪ್ರಚಾರ ಆಗಬಾರದು ನೂರಾರು ಶವಗಳನ್ನು ಹುತ್ತಿದ್ದೇನೆ ಎಂದು ಅನಾಮಿಕ ಹೇಳಿದ್ದಾನೆ.
ಈ ಬಗ್ಗೆ ಡಿ ಎನ್ ಎ ಪರೀಕ್ಷೆ ಸಹ ಆಗಲಿ ಅನಾಮಿಕ ವ್ಯಕ್ತಿಯೇ ಈ ಬಗ್ಗೆ ಹೇಳಬೇಕು.
ತನಿಖೆಯ ಎಲ್ಲಾ ಸತ್ಯಾಸತ್ಯಗಳು ಹೊರ ಬರಬೇಕು ಎಂದು ಮಾಧ್ಯಮಗಳಿಗೆ ಜಗದೀಶ ಶೆಟ್ಟರ್ ಹೇಳಿದರು.