ಬೆಳಗಾವಿ – ರಾಜ್ಯೋತ್ಸವದ ಮೆರವಣಿಗೆಯ ದಿನಾಂಕ ಮತ್ತು ಸಮಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಗೊಂದಲ ಸೃಷ್ಠಿ ಆಗಬಾರದು ಎನ್ನುವ ಉದ್ದೇಶದಿಂದ ಎಲ್ಲರ ಅಭಿಪ್ರಾಯ ಆಲಿಸಲು ಶುಕ್ರವಾರ ದಿ.4 ರಂದು ಸಂಜೆ 4-00 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಕನ್ನಡ ಸಂಘಟನೆಗಳ, ಯುವಕ ಮಂಡಳಗಳ,ರೂಪಕ ವಾಹನ ಹೊರಡಿಸುವ ರೂವಾರಿಗಳ ಸಭೆ ಕರೆಯಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ತಿಳಿಸಿದ್ದಾರೆ.
ಸಭೆಗೆ ಎಲ್ಲರೂ ತಪ್ಪದೇ ಹಾಜರಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಬೇಕು.ಸಭೆಯಲ್ಲಿ ಹಿರಿಯ ಕನ್ನಡಪರ ಹೋರಾಟಗಾರರು ಭಾಗವಹಿಸಲಿದ್ದಾರೆ.ಈ ಬಾರಿಯ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದ್ದು ಮೆರವಣಿಗೆಯ ಸಮಯ ಮತ್ತು ದಿನಾಂಕದ ಕುರಿತು ಭಿನ್ನವಾದ ಚರ್ಚೆಗಳು ನಡೆಯುತ್ತಿವೆ.ಈ ಕುರಿತು ಕನ್ನಡ ಸಂಘಟನೆಗಳಲ್ಲಿ ಒಮ್ಮತ ಮೂಡಿಸಲು ಹಿರಿಯ ಕನ್ನಡಪರ ಹೋರಾಟಗಾರರ ಸಲಹೆ ಮೇರೆಗೆ ಸಭೆ ಕರೆಯಲಾಗಿದೆ ಎಂದು ದೀಪಕ ಗುಡಗನಟ್ಟಿ ತಿಳಿಸಿದ್ದಾರೆ.