ಬೆಳಗಾವಿ

 ಸತೀಶ ಜಾರಕಿಹೊಳಿ ಬೆಂಬಲಿಸಿ ಡಿಎಸ್‌ಎಸ್ ಒಕ್ಕೂಟದಿಂದ ಪ್ರತಿಭಟನೆ

ಮೂಡಲಗಿ: ಗುರುವಾರದಂದು ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಮೂಡಲಗಿತಾಲೂಕ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸತೀಶ ಜಾರಕಿಹೊಳಿಬೆಂಬಲಿಸಿ ಪ್ರತಿಭಟನೆ ನಡೆಸಿ ಮುಖ್ಯ ಮಂತ್ರಿಗಳಿಗೆ ಮೂಡಲಗಿ ತಹಶೀಲ್ದಾರ ಡಿ.ಜಿ.ಮಹಾತ ಅವರ ಮುಖಾಂತರ ಮನವಿ ಸಲ್ಲಿಸಿದ ಸಂಧರ್ಭದಲ್ಲಿ ಮಾತನಾಡಿದ ಅವರು ಸತೀಶ ಜಾರಕಿಹೊಳಿಯವರು ಮಾಡುತ್ತಿರುವ ಸಾಮಾಜಿಕ ಕ್ರಾಂತಿ ನಮಗೆಲ್ಲಾ ಪ್ರೇರಣೆಯಾಗಿದೆ ಎಂದರು.
ಕೋಮುವಾದಿಗಳು ಮುಚ್ಚಿಟ್ಟಿದ್ದ ಸತ್ಯವನ್ನುಹೊರಹಾಕಿದ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ಹೇಳಿಕೆಗಳು ಸತ್ಯವಾಗಿದ್ದು, ಇದನ್ನು ಅರಗಿಸಿಕೊಳ್ಳಲಾಗದ ಮನುವಾದಿಗಳು, ಒಬ್ಬ ದಲಿತ ನಾಯಕನನ್ನು ತೇಜೋವಧೆ ಮಾಡಲು ಹೊರಟಿದ್ದಾರೆ, ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದು ಬೆಳಗಾವಿ
ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಲ್ಲಪ್ಪಗೌಡ ಲಕ್ಕಾರ ಹೇಳಿದರು.
ದಲಿತ ಮುಖಂಡರಾದ ರಮೇಶ ಸಣ್ಣಕ್ಕಿ ಹಾಗೂ ಸತೀಶ ಕರವಾಡೆ ಮಾತನಾಡಿ, ಸತೀಶ ಜಾರಕಿಹೊಳಿಯವರ ಹೇಳಿಕೆಯಿಂದ ಯಾರನ್ನೂಅವಮಾನಿಸುವ ಪ್ರಶ್ನೆ ಬರುವದಿಲ್ಲಾ, ಸತ್ಯವನ್ನೇ ಹೇಳಿದ್ದು, ಇದರಲ್ಲಿಹಿಂದೂ ಶಬ್ದವು, ಪರ್ಶಿಯನ್ ಭಾಷೆಯಲ್ಲಿ ವಿವಿಧ ಅರ್ಥಗಳನ್ನುಕಲ್ಪಿಸುತ್ತದೆ, ಅದನ್ನೇ ಜಾರಕಿಹೊಳಿಯವರು ಹೇಳಿರುವುದು ಸತ್ಯವಾಗಿದೆ ಎಂದರು.
ಮುಖಂಡರಾದ ರವಿ ಮೂಡಲಗಿ ಮಾತನಾಡಿ, ಸರ್ಕಾರವು ಬೇಕಾದರೆ, ಇದಕ್ಕೊಂದು ಸಮಿತಿರಚನೆ ಮಾಡಿ ಸತ್ಯಾಸತ್ಯತೆಯನ್ನು ಅರಿತುಕೊಳ್ಳಬೇಕಾಗಿದೆ. ಸತೀಶಜಾರಕಿಹೊಳಿಯವರು ‘ಬುದ್ಧ, ಬಸವ, ಅಂಬೇಡ್ಕರ, ತತ್ವ ಸಿದ್ಧಾಂತಗಳನ್ನು ಕಳೆದ ೨೫ ವರ್ಷಗಳಿಂದ ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ಆದರೆ, ಪಟ್ಟಭದ್ರ ಹಿತಾಸಕ್ತಿಗಳು ಇದನ್ನು ಸಹಿಸದೇ, ಸತೀಶ ಜಾರಕಿಹೊಳಿಯವರತೇಜೋವಧೆ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು,
ತಪ್ಪಿದಲ್ಲಿ ದಲಿತ ಸಂಘಟನೆಗಳು ಬೀದಿಗಿಳಿದು ರಾಜ್ಯಾದ್ಯಂತ ಪ್ರತಿಭಟನೆಹಮ್ಮಿಕೊಳ್ಳಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಶಾಬಪ್ಪ ಸಣ್ಣಕ್ಕಿ, ಯಶವಂತ ಮಂಟೂರ್, ಮಲ್ಲಿಕಾರ್ಜುನಕಬ್ಬೂರ, ಲಗಮಣ್ಣ ಕಳಸಣ್ಣವರ, ರಾಮಚಂದ್ರ ಸಿಡ್ಲೆಪ್ಪಗೋಳ,ಪುಂಡಲೀಕ ಹಲಗಿ, ಎಲ್.ಎಸ್.ಯಕ್ಸಂಬಿ, ರಮೇಶ ಈರಗಾರ, ತಮ್ಮಣ್ಣ ಗಸ್ತಿ,ಶ್ರೀಪಾದ ನಾಗನ್ನವರ, ಸುಭಾಸ ಅಳ್ಳಿಮಟ್ಟಿ, ಮಾನಿಂಗ ಮಾದರ, ಮಾರುತಿಮಾವರಕರ, ಎಸ್.ವಿ.ಸಣ್ಣಕ್ಕಿ, ಸೇರಿದಂತೆ ಮೂಡಲಗಿ ತಾಲೂಕ ದಲಿತ ಸಂಘಟನೆಗಳ ಸಮೀತಿಯ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.
TV24 News Desk
the authorTV24 News Desk

Leave a Reply