ಬೆಳಗಾವಿ

ಸರಕಾರದ ವಿಳಂಬ ನೀತಿ ೨೫ ಲಕ್ಷ ಜನರಿಂದ ಡಿ. 12ಕ್ಕೆ ವಿಧಾನಸೌಧಕ್ಕೆ ಮುತ್ತಿಗೆ

ಹುಕ್ಕೇರಿಯಲ್ಲಿ ನಡೆದ ಐತಿಹಾಸಿಕ ಬೃಹತ ಪಂಚಮಸಾಲಿ ಲಿಂಗಾಯತ ಸಮಾವೇಶದಲ್ಲಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ 25 ಲಕ್ಷ ಜನರಿಂದ ಬೆಂಗಳೂರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದು ಹೇಳಿದರು. ತಮ್ಮನ್ನು 2 ಎ ಪ್ರವರ್ಗಕ್ಕೆ ಸೇರಿಸಬೇಕು ಎಂದು ಪಂಚಮಸಾಲಿ ಲಿಂಗಾಯತರು ಬೇಡಿಕೆ ಮುಂದಿಟ್ಟು ಹೋರಾಡುತ್ತಿದ್ದರೆ, ತಮ್ಮನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕು ಎಂದು ಕುರುಬ ಸಮುದಾಯ ಹೋರಾಟ ಮಾಡುತ್ತಿದೆ.

ಪಂಚಮಸಾಲಿ ಹೋರಾಟ ಅಂತಿಮ ಹಂತ ತಲುಪಿದ್ದು, 2 ಎ ಮೀಸಲಾತಿ ನೀಡುವಲ್ಲಿ ಸರ್ಕಾರ ವಿಳಂಬ ನೀತಿ ತೋರುತ್ತಿರುವುದನ್ನು ಖಂಡಿಸಿ 25 ಲಕ್ಷ ಜನರಿಂದ ಡಿಸೆಂಬರ್ 12 ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ.  ಎಂದು‌ ಸ್ವಾಮೀಜಿ ಹೇಳಿದರು.

ಈ ಸಮಾವೇಶದಲ್ಲಿ ಮಾಜಿ ಸಚಿವ,ಎ.ಬಿ ಪಾಟೀಲ. ಶಶಿಕಾಂತ ನಾಯಿಕ. ತಾಲೂಕಾ ಅಧ್ಯಕ್ಷ ಗುಂಡು ಪಾಟೀಲ ಶಾಸಕರಾದ ಅರವಿಂದ ಬೆಲ್ಲದ, ಮಾಜಿ ಸಚಿವ ವಿನಯ ಕುಲಕರ್ಣಿ . ವಿಜಯಾನಂದ ಕಾಶಪ್ಪನವರ ವಿಶ್ವನಾಥ ಪಾಟೀಲ, ಜಿಲ್ಲಾ ಅಧ್ಯಕ್ಷ ಆರ್.ಕೆ ಪಾಟೀಲ. ಪುರಸಭೆ ಅಧ್ಯಕ್ಷ .ಎ.ಕೆ ಪಾಟೀಲ. ಮುಖಂಡರಾದ ವಿಜಯ ರವದಿ. ಸತ್ಯಪ್ಪ ನಾಯಿಕ. ಆರ.ಕೆ. ಪಾಟೀಲ,ರಾಜೇಶ ನೇರ್ಲಿ ರಾಜು ಮಗದುಮ್ಮ ರಾಜು ದ್ಯಾಮನಗೌಡರ ಸೇರಿದಂತೆ ಅಪಾರ ಜನರು ಪಾಲ್ಗೊಂಡಿದ್ದರು

 

 

 

 

TV24 News Desk
the authorTV24 News Desk

Leave a Reply