ಹುಕ್ಕೇರಿಯಲ್ಲಿ ನಡೆದ ಐತಿಹಾಸಿಕ ಬೃಹತ ಪಂಚಮಸಾಲಿ ಲಿಂಗಾಯತ ಸಮಾವೇಶದಲ್ಲಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ 25 ಲಕ್ಷ ಜನರಿಂದ ಬೆಂಗಳೂರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದು ಹೇಳಿದರು. ತಮ್ಮನ್ನು 2 ಎ ಪ್ರವರ್ಗಕ್ಕೆ ಸೇರಿಸಬೇಕು ಎಂದು ಪಂಚಮಸಾಲಿ ಲಿಂಗಾಯತರು ಬೇಡಿಕೆ ಮುಂದಿಟ್ಟು ಹೋರಾಡುತ್ತಿದ್ದರೆ, ತಮ್ಮನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕು ಎಂದು ಕುರುಬ ಸಮುದಾಯ ಹೋರಾಟ ಮಾಡುತ್ತಿದೆ.
ಪಂಚಮಸಾಲಿ ಹೋರಾಟ ಅಂತಿಮ ಹಂತ ತಲುಪಿದ್ದು, 2 ಎ ಮೀಸಲಾತಿ ನೀಡುವಲ್ಲಿ ಸರ್ಕಾರ ವಿಳಂಬ ನೀತಿ ತೋರುತ್ತಿರುವುದನ್ನು ಖಂಡಿಸಿ 25 ಲಕ್ಷ ಜನರಿಂದ ಡಿಸೆಂಬರ್ 12 ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಎಂದು ಸ್ವಾಮೀಜಿ ಹೇಳಿದರು.
ಈ ಸಮಾವೇಶದಲ್ಲಿ ಮಾಜಿ ಸಚಿವ,ಎ.ಬಿ ಪಾಟೀಲ. ಶಶಿಕಾಂತ ನಾಯಿಕ. ತಾಲೂಕಾ ಅಧ್ಯಕ್ಷ ಗುಂಡು ಪಾಟೀಲ ಶಾಸಕರಾದ ಅರವಿಂದ ಬೆಲ್ಲದ, ಮಾಜಿ ಸಚಿವ ವಿನಯ ಕುಲಕರ್ಣಿ . ವಿಜಯಾನಂದ ಕಾಶಪ್ಪನವರ ವಿಶ್ವನಾಥ ಪಾಟೀಲ, ಜಿಲ್ಲಾ ಅಧ್ಯಕ್ಷ ಆರ್.ಕೆ ಪಾಟೀಲ. ಪುರಸಭೆ ಅಧ್ಯಕ್ಷ .ಎ.ಕೆ ಪಾಟೀಲ. ಮುಖಂಡರಾದ ವಿಜಯ ರವದಿ. ಸತ್ಯಪ್ಪ ನಾಯಿಕ. ಆರ.ಕೆ. ಪಾಟೀಲ,ರಾಜೇಶ ನೇರ್ಲಿ ರಾಜು ಮಗದುಮ್ಮ ರಾಜು ದ್ಯಾಮನಗೌಡರ ಸೇರಿದಂತೆ ಅಪಾರ ಜನರು ಪಾಲ್ಗೊಂಡಿದ್ದರು