ಧಾರವಾಡ

ಭೀಕರ ಅಪಘಾತ ಸ್ಥಳದಲ್ಲಿಯೇ ನಾಲ್ವರ ಸಾವು

ಧಾರವಾಡ: ತಾಲೂಕಿನ ಸಮೀಪದ ತೆಗೂರು ಬಳಿ ಮುಲ್ಲಾ ಡಾಬಾ ಎದುರುಗಡೆ ಭೀಕರ ರಸ್ತೆ  ಅಪಘಾತದಲ್ಲಿ 4 ಮಂದಿ ಮೃತಪಟ್ಟಿದ್ದು. ಕೆಲವರು ಗಂಭೀರ ಗಾಯಗೊಂಡಿದ್ದಾರೆ.ಲಾರಿಗೆ ಹಿಂದಿನಿಂದ ಗುದ್ದಿದ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. 
      ಬೆಳಗಾವಿ ಕಡೆಯಿಂದ ಧಾರವಾಡ ಕಡೆಗೆ ಹೊರಟಿದ್ದ ಕಾರ್. ಕಾರ್ ಗೆ ಅಡ್ಡಲಾಗಿ ಬಂದ ವ್ಯಕ್ತಿಯನ್ನು ಉಳಿಸಲು ಹೋಗಿ ಪ್ರಾಣ ತೆತ್ತ ಸವಾರರು ಎಂದು ಹೇಳಲಾಗುತ್ತಿದೆ. ಮೃತರನ್ನು  ನಾಗಪ್ಪ ಮುದ್ದೋಜಿ (೨೯) ಮಹಾಂತೇಶ ಮುದ್ದೋಜಿ (೪೦) ಶ್ರೀಕುಮಾರ ನರಗುಂದ ಹಾಗೂ ಈರಣ್ಣ ರಾಮನಗೌಡರ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ೩ ಜನ ಗಾಯಗೊಂಡಿದ್ದು ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗರಗ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TV24 News Desk
the authorTV24 News Desk

Leave a Reply