ಕ್ರೈಂಜಿಲ್ಲೆಬೆಳಗಾವಿ

60ರೂಪಾಯಿಗಾಗಿ ಆಟೋ ಚಾಲಕನ ಮೇಲೆ ಪುಂಡರಿಂದ ಹಲ್ಲೆ:ಬೆಳಗಾವಿಯಲ್ಲಿ ಘಟನೆ!

ಬೆಳಗಾವಿ:

ಡ್ರಾಪ್ ತಗೆದುಕೊಂಡ ನಂತರ ಆಟೋ ಚಾಲಕನಿಗೆ ಹಣ ಕೊಡದೆ ಹಲ್ಲೆ ಮಾಡಿದ‌ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಬೆಳಗಾವಿ ಬಸ್ ನಿಲ್ದಾಣದಿಂದ ಸಮರ್ಥ ನಗರವರೆಗೂ ಡ್ರಾಪ್ ಪಡೆದ ಪುಂಡರ ತಂಡ ಆಟೋ ಚಾಲಕ ಅಲ್ತಾಫ್ ಹುಸೇನ್ ಎಂಬಾತನ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದೆ. ಮೊದಲು ಬಸ್ ನಿಲ್ದಾಣದಿಂದ 60 ರೂ ಬಾಡಿಗೆಗೆ ಆಟೋ ಹೊಂದಿಸಿಕೊಂಡು ಆಟೋ ಹತ್ತಿದ ಪುಂಡರು ಸಮರ್ಥ ನಗರ ಬಂದ ತಕ್ಷಣ ಆಟೋದಿಂದ ಇಳಿದಿದ್ದಾರೆ. ಈ ವೇಳೆ ಬಾಡಿಗೆ ಹಣವನ್ನು ಪುಂಡರ ಬಳಿ ಆಟೋ ಚಾಲಕ ಅಲ್ತಾಪ್ ಕೇಳಿದ್ದಾನೆ.ಹಣ ಕೇಳಿದ್ದಕ್ಕೆ ಸಿಟ್ಟುಗೊಂಡ ಪುಂಡರು ಏಕಾಎಕಿ ಅಲ್ತಾಫ್ ಮೇಲೆ ದೊಣ್ಣೆಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಆಟೋ ಚಾಲಕನನ್ನು ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಘಟನಾ ಸ್ಥಳಕ್ಕೆ ಬೆಳಗಾವಿಯ ಮಾರ್ಕೇಟ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

TV24 News Desk
the authorTV24 News Desk

Leave a Reply