ಬೆಳಗಾವಿ:
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಪ್ರಸಿದ್ಧ ನರಸಿಂಹವಾಡಿಯ ದತ್ತಮಂದಿರಕ್ಕೆ ಕೃಷ್ಣಾ ಹಾಗೂ ಪಂಚಗಂಗಾ ನದಿಯ ನೀರು ನುಗ್ಗಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಪ್ರಖ್ಯಾತ ತೀರ್ಥ ಕ್ಷೇತ್ರವಾಗಿರುವ ದತ್ತ ಮಂದಿರದ ಗರ್ಭ ಗುಡಿಗೆ ನೀರು ನುಗ್ಗಿದ್ದು, ನೀರು ನುಗ್ಗಿದ್ದರೂ ಸಹ ಭಕ್ತಾಧಿಗಳು ನಡುಮಟ್ಟದ ನೀರಿನಲ್ಲಿಯೇ ದತ್ತ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ 92 ಸಾವಿರ ಕ್ಯೂಸೇಕ್ ಒಳಹರಿವಿದ್ದು ಅಲ್ಲದೆ ಅದರ ಉಪನದಿಗಳಾದ ದೂಧಗಂಗಾ,ವೇದಗಂಗಾ, ಪಂಚಗಂಗಾ ನದಿಗಳ ಒಳಹರಿವೂ ಸಹ ಹೆಚ್ಚಾಗಿದೆ. ಮಹಾರಾಷ್ಟ್ರದ ಯಾವುದೇ ಜಲಾಶಯದಿಂದಲೂ ಸಹ ಈವರೆಗೆ ಅಧಿಕೃತವಾಗಿ ಮಹಾರಾಷ್ಟ್ರ ನೀರು ಹರಿದು ಬಿಟ್ಟಿಲ್ಲವಾದರೂ ಸಹ ಘಟ್ಟ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ನೀರು ನದಿಯ ಒಡಲು ಸೇರುತ್ತಿದೆ. ಸಧ್ಯ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ನರಸಿಂಹವಾಡಿಯ ದತ್ತ ದೇವರಿಗೂ ಸಹ ಜಲ ದಿಗ್ಬಂಧನವಾಗಿದೆ.



