ಬೆಳಗಾವಿ:
ಬೆಳಗಾವಿ ನಗರದಾದ್ಯಂತ ನಿರಂತರ ಮಳೆಯಿಂದ ಚರಂಡಿ ನೀರು ಬ್ಲಾಕ್ ಆಗಿ ಸಮಸ್ಯೆ ಆಗುತ್ತಿರುವುದನ್ನು ಮನಗಂಡ ಮಹಾನಗರ ಪಾಲಿಕೆ ಆಯುಕ್ತೆ ಬಿ ಶುಭಾ ಅವರು ಇಂದು ಸುರಿಯುತ್ತಿರುವ ಮಳೆಯಲ್ಲಿಯೇ ತಾವೇ ಛತ್ರಿ ಹಿಡಿದು ಖುದ್ದಾಗಿ ಫೀಲ್ಡೀಗಿಳಿದು ಚರಂಡಿ ಸ್ಛಚ್ಛತೆ ಮಾಡಿಸಿದರು. ನಗರದ ಹಲವು ಭಾಗಗಳಲ್ಲಿ ಮಳೆಯಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ದೂರುಗಳು ಬಂದ ಹಿನ್ನೆಲೆ ಇಂದು ಸ್ವತಹ ಅವರೇ ಫೀಲ್ಡಿಗಿಳಿದು ಪರಿಶೀಲನೆ ನಡೆಸಿ ಮಹಾನಗರ ಪಾಲಿಕೆ ಸಿಬ್ಬಂಧಿಗೆ ಬ್ಲಾಕೇಜ್ ಆಗುತ್ತಿರುವ ಕಡೆಗಳಲ್ಲಿ ಬ್ಲಾಕೇಜ್ ಕ್ಲೀಯರ್ ಮಾಡುವಂತೆ ಸೂಚನೆ ನೀಡಿದರು. ಅಲ್ಲದೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆಯಿಂದಾಗುವ ತೊಂದರೆಗಳನ್ನು ಎದುರಿಸಲು ಈಗಾಗಲೇ ಮೂರು ತಂಡಗಳನ್ನು ರಚಿಸಲಾಗಿದ್ದು ಆ ತಂಡಗಳು ಮಳೆ ಸಂದರ್ಭದಲ್ಲಿ ಜನರ ಸಹಾಯಕ್ಕೆ ಬರಲಿವೆ ತುರ್ತು ಸಂದರ್ಭಗಳಲ್ಲಿ ಜನರು ಮಹಾನಗರ ಪಾಲಿಕೆ ಸಿಬ್ಬಂಧಿಯನ್ನು ಸಂಪರ್ಕ ಮಾಡಲು ಮಹಾನಗರ ಪಾಲಿಕೆ ಆಯುಕ್ತೆ ಶುಭಾ ಬಿ ಕೋರಿದರು.