ಬೆಳಗಾವಿಬೆಳಗಾವಿ ನಗರ

ಬೆಳಗಾವಿ  ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ  ಕಳ್ಳತನ

ಬೆಳಗಾವಿ: ನಗರದ  ಹಿಂದವಾಡಿಯಲ್ಲಿ  ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಮೂರನೇ ಬಾರಿ ಕಳ್ಳತನವಾಗಿದೆ. ಅಪರಿಚಿತ ಕಳ್ಳರು ದೇವಿಯ ತಲೆಯ ಮೇಲಿದ್ದ ಬೆಳ್ಳಿ ಛತ್ರಿ, ಪ್ರಭಾವಲ, ಸುಮಾರು 4 ಕೆ.ಜಿ ತೂಕದ ಬೆಳ್ಳಿಯ ಅಂಬಾರಿ ಹಾಗೂ ಸುಮಾರು 7 ಕೆ.ಜಿ ತೂಕದ ಬೆಳ್ಳಿಯ ಆಭರಣಗಳನ್ನು ಕದ್ದೊಯ್ದಿರುವುದು ಬೆಳಕಿಗೆ ಬಂದಿದೆ
ಬೆಳಗಾವಿ ನಗರದ ಹಿಂದವಾಡಿಯ ಶ್ರೀ ಮಹಾಲಕ್ಷ್ಮಿ ದೇವಸ್ಥಾನವು ಈ ಭಾಗದ ಸಾವಿರಾರು ಭಕ್ತರ ಆರಾಧನೆಯ ಸ್ಥಳವಾಗಿದೆ. ಸುತ್ತಮುತ್ತ ಸಾಕಷ್ಟು ಜನವಸತಿ ಇರುವ ಈ ದೇವಸ್ಥಾನದಲ್ಲಿ ಮೂರನೇ ಬಾರಿ ಕಳ್ಳತನದ ಘಟನೆ ನಡೆದಿರುವುದರಿಂದ ಭಕ್ತರು ಬೆಚ್ಚಿಬಿದ್ದಿದ್ದಾರೆ. ಇಂದು ಬೆಳಗ್ಗೆ ದೇವಸ್ಥಾನದ ಅರ್ಚಕರು ನಿತ್ಯ ಪೂಜೆಗೆಂದು ಬಂದಾಗ ಈ ರೀತಿಯ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಕೂಡಲೇ ದೇವಸ್ಥಾನದ ಟ್ರಸ್ಟಿಗಳಿಗೆ ಕರೆ ಮಾಡಿ ಈ ಬಗ್ಗೆ ತಿಳಿಸಿದರು. ಟ್ರಸ್ಟಿಗಳು, ಅರ್ಚಕರು ಸೇರಿ ದೇವಸ್ಥಾನಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಮಹಾಲಕ್ಷ್ಮಿ ದೇವಿಯ ಗದ್ದುಗೆಗೆ ಅಳವಡಿಸಿದ್ದ ದಪ್ಪ ಕಸೂತಿ ಬೆಳ್ಳಿಯ ಪಟ್ಟಿ, ತಲೆಯ ಮೇಲಿದ್ದ ಬೆಳ್ಳಿಯ ಛತ್ರ ಇತ್ಯಾದಿ ಸೇರಿದಂತೆ ಸುಮಾರು 7 ಕೆ.ಜಿ ತೂಕದ ಬೆಳ್ಳಿ ವಸ್ತುಗಳು ಕಳ್ಳತನವಾಗಿರುವುದು ಪತ್ತೆಯಾಗಿದೆ.
ಕೂಡಲೇ ದೇವಸ್ಥಾನದ ಧರ್ಮಾಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಟಿಳಕವಾಡಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ದಯಾನಂದ ಶೇಗುಂಸಿ ಅವರು ತಮ್ಮ ಸಿಬ್ಬಂಧಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ದೇವಸ್ಥಾನದ ಟ್ರಸ್ಟಿ ಸುಮತಿ ಕೂಡಲೆ, 48 ವರ್ಷಗಳ ಹಿಂದೆ ಹಿಂದವಾಡಿ ಮಹಿಳಾ ಮಂಡಳದಿಂದ ದೇವಸ್ಥಾನ ಸ್ಥಾಪನೆಯಾಗಿದ್ದು, ಅಂದಿನಿಂದ ಮಂಡಲದ ಆಡಳಿತಕ್ಕೆ ಒಳಪಟ್ಟಿದೆ. ನಿನ್ನೆ ರಾತ್ರಿ ಕಳ್ಳತನ ನಡೆದಿರಬಹುದು, ದೇವಿಯ ಕೊಡೆ, ಗದ್ದುಗೆಗೆ ಅಳವಡಿಸಿದ್ದ ಸುಮಾರು 4 ಕೆಜಿ ತೂಕದ ಬೆಳ್ಳಿ ಕಸೂತಿ ಪಟ್ಟಿ, ಸುಮಾರು 7 ಕೆಜಿ ಬೆಳ್ಳಿಯನ್ನು ಕಳ್ಳರು ಕದ್ದೊಯ್ದಿದ್ದಾರೆ. ಹಾಗಾಗಿ ನಮಗೆ ತುಂಬಾ ದುಃಖವಾಗುತ್ತಿದೆ. ಕೂಡಲೇ ಕಳ್ಳರನ್ನು ಬಂಧಿಸುವಂತೆ ಪೊಲೀಸರಿಗೆ ಮನವಿ ಮಾಡಿದರು.ಕಾರ್ಪೊರೇಟರ್ ನಿತಿನ್ ಜಾಧವ್ ಕೂಡ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ದೇವಸ್ಥಾನದಲ್ಲಿ ಈ ಹಿಂದೆ ಎರಡು ಬಾರಿ ಕಳ್ಳತನವಾಗಿದ್ದು, ಈಗ ಮೂರನೇ ಬಾರಿ ಕಳ್ಳತನವಾಗಿದೆ. ಈ ಹಿಂದೆ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದರೂ ಏನೂ ಪ್ರಯೋಜನವಾಗಿಲ್ಲ. ಈಗಲಾದರೂ  ಆರೋಪಿಗಳನ್ನು ಪೊಲೀಸರು ಬಂಧಿಸಬೇಕು ಎಂದು ಆಗ್ರಹಿಸಿದರು.
TV24 News Desk
the authorTV24 News Desk

Leave a Reply