
ಶಾಲೆಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಮಾಡುವ ವೇಳೆ ಶಾಲೆಯ ಕಲ್ಲಿನ ಹಿಂದೆ ಬೃಹತ್ ನಾಗರಹಾವು ಪ್ರತ್ಯಕ್ಷವಾಗಿದೆ.ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದ ಶಿಂಗಾಡಿ ತೋಟದ ವಸತಿ ಶಾಲೆಯಲ್ಲಿ ನಾಗರಹಾವು ಪ್ರತ್ಯಕ್ಷವಾಹಿದ್ದು,ನಾಗರಹಾವನ್ನು ಕಂಡು ಶಿಕ್ಷಕರು ಮತ್ತು ಮಕ್ಕಳು ಭಯಭೀತರಾದ ಘಟನೆ ನಡೆದಿದೆ. ಕೂಡಲೇ ತೋಟದ ವಸತಿಯ ಜನರು ಉರಗತಜ್ಞ ಕಲ್ಲಯ್ಯ ಮಠದ ಅವರನ್ನು ಕರೆಸಿ ಹಾವನ್ನು ಹಿಡಿಸಿದ್ದಾರೆ.ನಾಗರಹಾವನ್ನು ರಕ್ಷಿಸಿದ ಕಲ್ಲಯ್ಯ ಮಠದ ಅವರು ಆ ಹಾವನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.ಉರಗ ತಜ್ಞ ಕಲ್ಲಯ್ಯ ಬೃಹತ್ ನಾಗರಹಾವು ಹಿಡಿಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.