ಬೆಳಗಾವಿ ಧಾರವಾಡ ನೇರ ರೈಲು ದಿ ಸುರೇಶ್ ಅಂಗಡಿಯ ಕನಸು ಇಂದು ಸಭೆ ಮಾಡಿ ಸುರೇಶ್ ಅಂಗಡಿ ಯ ಕನಸನ್ನು ನನಸು ಮಾಡುವ ಪ್ರಯತ್ನ ಮಾಡ್ತೀವಿ ಎಂದು ಬೆಳಗಾವಿ ಕೇಂದ್ರ ಸಚಿವ ಬಿ ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ..
ಭೂ ಸ್ವಾಧೀನ ಪ್ರಕ್ರಿಯೆ ಸಮಸ್ಯೆಯಾಗಿದೆ ಈ ಸಮಸ್ಯೆ ಬಗ್ಗೆ ಇಂದು ಚರ್ಚೆ ಮಾಡಿ ಸರಿ ಮಾಡ್ತೀವಿ. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಈ ಅವಧಿಯಲ್ಲಿ ಸುರೇಶ್ ಅಂಗಡಿ ಯ ಕನಸನ್ನು ನನಸು ಮಾಡುಲು ನಿರ್ಧರಿಸಿದ್ದಾರೆ ಹಾಗೂ ಬೆಳಗಾವಿ ಜಿಲ್ಲಾಧಿಕಾರಿ ಸಹ ಗಂಭೀರವಾಗಿ ಈ ವಿಷಯದ ಬಗ್ಗೆ ಪರಿಗಣಿಸಿದ್ದಾರೆ. ಈ ವಿಷಯವನ್ನು ಧಾರವಾಡ ಜಿಲ್ಲಾಧಿಕಾರಿ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ವಿಷಯದ ಬಗ್ಗೆ ಮಾತನಾಡುತ್ತೇನೆ. ಮುಂದಿನ ತಿಂಗಳು ಸ್ಲೀಪರ್ ಕೋಚ್ ವಂದೇ ಭಾರತ ಬರಲಿದೆ ಮತ್ತು ಅತಿ ಶೀಘ್ರದಲ್ಲಿ ಬೆಳಗಾವಿ ಬೆಂಗಳೂರು ಮಧ್ಯ ಮುಂದಿನ ತಿಂಗಳು ರೈಲು ಓಡಾಡಲಿದೆ ಎಂದು ವಿ ಸೋಮಣ್ಣ ಮಾಹಿತಿ ನೀಡಿದ್ದರು.