ಹುಕ್ಕೇರಿ : ಈರಪ್ಪ ರಾಯಪ್ಪ ಚೌಗಲಾ (೪೧) ಶಿರಗಾಂವ ಗ್ರಾಮದಲ್ಲಿ ನೇಣು ಹಾಕಿಕೊಂಡು ವ್ಯಕ್ತಿ ಸಾವನ್ನಪಿದ್ದಾನೆ. ಹುಕ್ಕೇರಿ ತಾಲೂಕಿನ ಶಿರಗಾಂವ ಗ್ರಾಮದ ಈರಪ್ಪ ಸ್ಥಳಿಯ ಅವರಗೋಳ ಗ್ರಾಮದ ಖಾಸಗಿ ಬ್ಯಾಂಕ ಒಂದರಲ್ಲಿ ಕೆಲಸ ಮಾಡುತ್ತಿದ್ದನು.
ಆದರೆ ಈರಪ್ಪ ಇಂದು ನೇಣಿಗೆ ಶರಣಾಗಿದ್ದಾನೆ. ಈರಪ್ಪ ಚೌಗಲಾ ಈತನಿಗೆ ಏಳೆಂಟು ವರ್ಷಗಳಿಂದ ಬೆನ್ನು ನೋವು ಸೊಂಟ ನೋವಿನಿಂದ ತೊಂದರೆ ಅನುಭವಿಸುತ್ತಿದ್ದನು ಇದರಿಂದ ಸಾರಾಯಿ ಚಟಕ್ಕೆ ಬಿದ್ದಿದ್ದನು. ಹಾಗಾಗಿ ಮಾನಸಿಕವಾಗಿ ಮನನೋಂದು ನೇಣುಹಾಕಿಕೊಂಡು ಸಾವಿಗಿಡಾಗಿದ್ದಾನೆ ಎಂದು ಕೇಳಿ ಬಂದಿದೆ.
ಮೃತ ಈರಪ್ಪನಿಗೆ ಎರಡು ಹೆಣ್ಣು ಮಕ್ಕಳು ಒಂದು ಗಂಡು ಮಗು. ಆದರೆ ಸಾವಿಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಹುಕ್ಕೇರಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.