ದೇಶ

ಹಿಂದುತ್ವದ ಫೈರ್ ಬ್ರ್ಯಾಂಡ್ ಸುಧಿರ್ ಸುರಿ  ಮೇಲೆ ಗುಂಡಿನ ದಾಳಿ 

ಅಮೃತಸರ: ಪಂಜಾಬ್‌ನ ಅಮೃತಸರದ ಪಕ್ಕದಲ್ಲಿರುವ ದೇವಸ್ಥಾನದ ಎದುರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಗುಂಡಿನ ದಾಳಿ ನಡೆಸಲಾಗಿದೆ. ಪ್ರತಿಭಟನೆ ವೇಳೆ ಸುಧೀರ್ ಸುರಿಗೆ ಪೊಲೀಸ್ ಭದ್ರತೆ ನೀಡಲಾಗಿತ್ತು. ಆದರೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದೆ. ಇದರಲ್ಲಿ ಎರಡು ಗುಂಡುಗಳು ಸುಧೀರ್ ಎದೆಗೆ ತುಗುಲಿದೆ. ಇದರಿಂದ ಸುಧೀರ್ ಸುರಿ ಸ್ಥಳದಲ್ಲಿಯೇ ಅಸುನೀಗಿದ್ದಾದರೆ . ಅಮೃತ ಸರದಲ್ಲಿ ಶಿವ ಸೇನೆ ಎಂಬ ಸಂಘಟನೆ ಸಂಸ್ಥಾಪಕರಾಗಿದ್ದಾರೆ. ತಮ್ಮ ಶಿವ ಸೇನಾ ಸಂಘಟನೆಗಳ ಮೂಲಕ ಅಮೃತಸರ ಸೇರಿದಂತೆ ಪಂಜಾಬ್‌ನ ಬಹುತೇಕ ಭಾಗದಲ್ಲಿ ಹಿಂದೂ ಪರ ಹೋರಾಟಗಳನ್ನು ನಡೆಸಿದ್ದಾರೆ. ಮತಾಂತರ ವಿರುದ್ಧ, ದೇವಸ್ಥಾನಗಳ ಪಾವಿತ್ರ್ಯತೆ ಕಾಪಾಡಿಕೊಳ್ಳುವ ಕುರಿತು ಹೋರಾಟ ನಡೆಸಿದ್ದಾರೆ.
ಪ್ರತಿಭಟನೆ ವೇಳೆ ಜನರ ನಡುವಿನಿಂದ ಬಂದು ಏಕಾಏಕಿ ಸುಧೀರ್ ಸುರಿ ಮೇಲೆ ಗುಂಡು ಹಾರಿಸಲಾಗಿದೆ. ನಾಲ್ಕು ಸುತ್ತು ಗುಂಡು ಹಾರಿಸಲಾಗಿದೆ. ಪೊಲೀಸ್ ಭದ್ರತೆನೀಡಿದ್ದರೂ ಗುಂಡಿನ ದಾಳಿ ನಡೆದಿದೆ. ತೀವ್ರ ರಕ್ತಸ್ರಾವಗೊಂಡಿತು. ತಕ್ಷಣವೇ ಸುಧೀರ್ ಅವರನ್ನು ಆಸ್ಪತ್ರೆ ದಾಖಲಿಸಲಾಗಿದೆ. ಆದರೆ ಅಷ್ಟರೊಳಗೆ ಸುಧೀರ್ ಸುರಿ  ಸಾವನ್ನಪ್ಪಿದ್ದಾರೆ.
 ಸುಧೀರ್ ಸುರಿ ಬೆಂಬಲಿಗರು ಗುಂಡಿನ ದಾಳಿ ನಡೆಸಿದ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯಿಂದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.
TV24 News Desk
the authorTV24 News Desk

Leave a Reply