ಬೆಳಗಾವಿಬೆಳಗಾವಿ ನಗರ

ಪಟ್ಟು ಬಿಡದ ಅಧ್ಯಾಪಕರು ಸ್ಪಂದನೆ ನೀಡದ ಅಧಿಕಾರಿಗಳು

ಬೆಳಗಾವಿ: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಅಧ್ಯಾಪಕರು ತಮ್ಮ ಹಲವು ದಿನಗಳವರೆಗೆ ನೆನೆಗುದಿಗೆ ಬಿದ್ದಿರುವ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬೆಳಗಾವಿ ನಗರದಲ್ಲಿರುವ ವಿವಿಧ ಮೌಲ್ಯಮಾಪನ ಕೇಂದ್ರಗಳಲ್ಲಿ ಪದವಿ ವಿಷಯಗಳ ಮೌಲ್ಯಮಾಪನ ಕಾರ್ಯವನ್ನು ಬಹಿಷ್ಕರಿಸಿ ಮುಷ್ಕರವನ್ನು ಕೈಗೊಂಡಿದ್ದು ವಿಶ್ವವಿದ್ಯಾಲಯದ ಅಧಿಕಾರಿಗಳು ಯಾವುದೇ ರೀತಿಯ ಉತ್ತರ ನೀಡದೇ ಇರುವುದರಿಂದ ಬಹಿಷ್ಕಾರವನ್ನು ನಿರಂತರವಾಗಿ ಮುಂದುವರಿಸಿದ್ದಾರೆ ಇದರಿಂದ ಮೌಲ್ಯಮಾಪನ ಕಾರ್ಯವು ಅರ್ಧಕ್ಕೆ ನಿಂತಿದ್ದು ಮುಂದಿನ ವಿದ್ಯಾರ್ಥಿಗಳ ಫಲಿತಾಂಶಕ್ಕೆ ಹೊಡೆತ ಬಿದ್ದಂತಾಗಿದೆ. ಈ ಮೊದಲು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಅಧ್ಯಾಪಕರ ಪರಿಷತ್ತು ಹಲವು ದಿನಗಳ ಹಿಂದೆ ಮೌಲ್ಯಮಾಪನ ಕುಲ ಸಚಿವರಿಗೆ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು. ಕುಲ ಸಚಿವರು ಮಾತನಾಡಿ ಕುಲಪತಿಗಳೊಂದಿಗೆ ಚರ್ಚಿಸಿ ಇದೇ ತಿಂಗಳು ನವೆಂಬರ್ 2 ಒಳಗಾಗಿ ತಮಗೆ ಸಕಾರಾತ್ಮಕವಾಗಿ ಸ್ಪಂದನೆ ನೀಡುವುದಾಗಿ ಹೇಳಿಕೆಯನ್ನು ಕೊಟ್ಟಿದ್ದರು ಆದರೆ ಕುಲ ಸಚಿವರು ಕೊಟ್ಟ ಗಡುವು   ಮುಗಿದಿದ್ದರಿಂದ ಎಲ್ಲಾ ಮೌಲ್ಯಮಾಪನ ಕೇಂದ್ರಗಳಲ್ಲಿರುವ ಮೌಲ್ಯಮಾಪಕರು ತಮ್ಮ ಮೌಲ್ಯಮಾಪನ ಕಾರ್ಯವನ್ನು ಬದಿಗೊತ್ತಿ ಬೇಡಿಕೆಗಳು ಈಡೇರಿಸುವವರೆಗೂ ಮೌಲ್ಯಮಾಪನವನ್ನು ಮಾಡುವುದಿಲ್ಲ ಎಂದು ಹೇಳಿ ಮುಷ್ಕರವನ್ನು ಕೈಗೊಂಡಿದ್ದಾರೆ ವಿಜಯಪುರ ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳ ವಿವಿಧ ಮಹಾವಿದ್ಯಾಲಯಗಳ ಅಧ್ಯಾಪಕರು ಶುಕ್ರವಾರ ಮುಂಜಾನೆಯಿಂದಲೇ ಮುಷ್ಕರವನ್ನು ಪ್ರಾರಂಭಿಸಿದರೂ ಕೂಡ ಯಾವುದೇ ಮೌಲ್ಯಮಾಪನ ಕೇಂದ್ರಕ್ಕೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಅಧಿಕಾರಿಗಳಾಗಲಿ, ಕುಲ ಸಚಿವರಾಗಲಿ ಭೇಟಿ ನೀಡದೆ ಇರುವುದರಿಂದ  ಮುಷ್ಕರವನ್ನು ನಿರಂತರವಾಗಿ ಮುಂದುವರಿಸಲಾಗಿದೆ.
ಈ ಸಂದರ್ಭದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಅಧ್ಯಾಪಕರ ಪರಿಷತ್ತಿನ ಅಧ್ಯಕ್ಷರಾದ ಪ್ರೊ. ಎಂ.ಎ.ಬಿರಾದಾರ್, ಉಪಾಧ್ಯಕ್ಷರಾದ ಸಂಗಮೇಶ್ ಲೋಕಪುರ್, ಜಂಟಿ ಕಾರ್ಯದರ್ಶಿಗಳಾದ ಡಾ.ಅಶೋಕ ರಾಥೋಡ,  ಕಾರ್ಯಕರ್ತರಾದ ಡಾ.ಪ್ರಕಾಶ ರಾಥೋಡ , ವಿವಿಧ ವಿಷಯಗಳ ಚೇರ್ಮನ್ನರು ಹಾಗೂ ಬೆಳಗಾವಿ ವಿಜಯಪುರ ಬಾಗಲಕೋಟೆ ಜಿಲ್ಲೆಗಳ ವಿವಿಧ ಮಹಾವಿದ್ಯಾಲಯಗಳ ಅಧ್ಯಾಪಕರು ಮುಷ್ಕರವನ್ನು  ಮುಂದುವರಿಸಿದ್ದಾರೆ
TV24 News Desk
the authorTV24 News Desk

Leave a Reply