ಬೆಳಗಾವಿಬೆಳಗಾವಿ ನಗರ

ನಾಡವಿರೋಧಿ ಎಂಇಎಸ್  ವಿರುದ್ಧ ಗುಡಗಿದ ಗುಡಗನಟ್ಟಿ

ಬೆಳಗಾವಿ: ಕುಂದನಗರಿಯಲ್ಲಿ  ಅದ್ದೂರಿ  ೬೭ನೇಯ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಲು ಭರದ ಸಿದ್ಧತೆ ನಡೆದಿದೆ. ಬೆಳಗಾವಿ  ನಗರ ನವ ವಧುವಿನಂತೆ ಶೃಂಗಾರ್ ಗೊಳ್ಳುತ್ತಿದ್ದು,  ಕರ್ನಾಟಕದ ಹಬ್ಬ ಕರ್ನಾಟಕ ರಾಜ್ಯೋತ್ಸವ ಗಡಿಭಾಗ  ಬೆಳಗಾವಿಯಲ್ಲಿ ವಿಜೃಂಭಣೆಯಿಂದ ಆಚರಿಸುವ ಸಂದರ್ಭದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ತನ್ನಹಳೆ ಚಾಳಿಯನ್ನು ಮತ್ತೆ ಮುಂದುವರಿಸಿದೆ. ಈ ಬಗ್ಗೆ ಪ್ರತಿಕಿಯಿಸಿದ  ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ನಾಡದ್ರೋಹಿ ಎಂಇಎಸ್ ಸಂಘಟನೆಗೆ ಕರಾಳ ದಿನ ಆಚರಿಸಲು,ಸೈಕಲ್ ರ್ಯಾಲಿ ನಡೆಸಲು ಅನುಮತಿ ನೀಡಬಾರದು ಎಂದು  ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಸರ್ಕಾರಗಳು ನಾಡದ್ರೋಹಿಗಳಿಗೆ ರಾತ್ರೋ ರಾತ್ರಿ ಅನುಮತಿ ನೀಡಿ ಕನ್ನಡಿಗರಿಗೆ ಮೋಸ ಮಾಡುತ್ತಲೇ ಬಂದಿದ್ದು,ಈ ಬಾರಿಯೂ ಸರ್ಕಾರ ಕರಾಳ ದಿನಾಚರಣೆಗೆ ಅನುಮತಿ ನೀಡಿದ್ರೆ ಕರವೇ ಕಾರ್ಯಕರ್ತರು ಇದನ್ನು ಸಹಿಸುವದಿಲ್ಲ ಮುಖ್ಯಮಂತ್ರಿಗಳು ಬೆಳಗಾವಿಗೆ ಬಂದಾಗಲೆಲ್ಲಾ ಕಪ್ಪು ಬಾವುಟ ತೋರಿಸುತ್ತೇವೆ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಎಚ್ಚರಿಕೆ ನೀಡಿದ್ದಾರೆ.

ನಾಡವಿರೋಧಿ ಎಂಇಎಸ್ ನಾಯಕರು ಈ ಬಾರಿಯೂ ಮಹಾರಾಷ್ಟ್ರದ ಶಿವಸೇನೆ ನಾಯಕರನ್ನು ಬೆಳಗಾವಿಗೆ ಕರೆಯಿಸಿ,ಅವರಿಂದ ಪ್ರಚೋದನಕಾರಿ ಭಾಷಣ ಮಾಡಿಸಿ ಬೆಳಗಾವಿಯಲ್ಲಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತುವ ದುಸ್ಸಹಾಸಕ್ಕೆ ಕೈ ಹಾಕಿದ್ದು, ಕೊಲ್ಹಾಪೂರದ ಶಿವಸೇನೆ ಮುಖಂಡ ವಿಜಯ ದೇವಣೆಗೆ ತಾಕತ್ತಿದ್ದರೆ ಬೆಳಗಾವಿಗೆ ಬರಲಿ,ಕರವೇ ಕಾರ್ಯಕರ್ತರು ವಿಜಯ ದೇವಣೆಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ದೀಪಕ ಗುಡಗನಟ್ಟಿ ಸವಾಲು ಹಾಕಿದ್ದಾರೆ.

    ಸೂರ್ಯ ಚಂದ್ರ ಇರೋವರೆಗೆ ಬೆಳಗಾವಿಯ ನೆಲ ಕನ್ನಡದ ನೆಲವಾಗಿಯೇ ಇರುತ್ತದೆ.ಎಂಇಎಸ್ ನಾಯಕರ ಚೀರಾಟ ಗುದ್ದಾಟದಿಂದ ಬೆಳಗಾವಿಯ ಒಂದಿಂಚೂ ಜಾಗ ಅಲಗಾಡುವದಿಲ್ಲ,ಬೆಳಗಾವಿ ಎಂದೆಂದಿಗೂ ನಮ್ಮದಾಗಿರುತ್ತದೆ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ‌.

ರಾಜರತ್ನ ಅಪ್ಪು ಉತ್ಸವ

ಕರ್ನಾಟಕದ ರತ್ನ ಪುನೀತ ರಾಜ್ ಕುಮಾರ ನಮ್ಮನ್ನು ಅಗಲಿ ಒಂದು ವರ್ಷವಾಗಿದೆ,ಬೆಳಗಾವಿಯಲ್ಲಿ ಅಪ್ಪು ಅವರನ್ನು ವಿಶೇಷವಾಗಿ ಸ್ಮರಿಸಲು ಕರವೇ ನಿರ್ಧರಿಸಿದೆ.ಬೆಳಗಾವಿಯ ರಾಜ್ಯೋತ್ಸವದಲ್ಲಿ ಈ ಬಾರಿ ಅಪ್ಪು ಉತ್ಸವವನ್ನು ಆಚರಿಸುತ್ತೇವೆ.ರಾಜ್ಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಬರುವ ಪ್ರತಿಯೊಬ್ಬ ಕನ್ನಡದ ಸೇನಾನಿ ಕನ್ನಡದ ಬಾವುಟದ ಜೊತೆ ಅಪ್ಪು ಭಾವಚಿತ್ರವನ್ನು ತಂದು ರಾಜ್ಯೋತ್ಸವದ ಮೆರವಣಿಗೆಯಲ್ಲಿ ಪ್ರದರ್ಶಿಸುವ ಮೂಲಕ ರಾಜ್ಯೋತ್ಸವವನ್ನು ಅಪ್ಪು ಉತ್ಸವವನ್ನಾಗಿ ಆಚರಿಸುವಂತೆ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮನವಿ ಮಾಡಿದ್ದಾರೆ.

 

TV24 News Desk
the authorTV24 News Desk

Leave a Reply