ಕೈ ಗಾಗಿ ಮೋಹನ್ ಸಾಂಬ್ರೇಕರ ಭರ್ಜರಿ ಪ್ರಚಾರ..!
ಬೆಳಗಾವಿ : ಕಳೆದ ಒಂದು ತಿಂಗಳಿಂದ ಬೆಳಗಾವಿ ಲೋಕಸಭಾ ಕ್ಷೇತ್ರದ ನಗರ, ಗ್ರಾಮೀಣ ಪ್ರದೇಶಗಳಲ್ಲಿ ರಾರಾಜಿಸುತ್ತಿದ್ದ ರಾಜಕೀಯ ಬಾವುಟಗಳು, ಸಭೆ, ಸಮಾರಂಭ, ರೋಡ್ ಶೋ, ಬಹಿರಂಗ ಪ್ರಚಾರ ಸಭೆಗಳಿಂದ ಮಿಂದೆದಿದ್ದ ಗಡಿ ಜಿಲ್ಲೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರಕ್ಕೆ ಕೆಲವೇ ಗಂಟೆಗಳು ಮಾತ್ರ ಬಾಕಿಯಿದ್ದು, ಹುರಿಯಾಳುಗಳ ಎದೆ ಬಡಿತ ಹೆಚ್ಚಾಗುವಂತೆ ಮಾಡಿದೆ.
ಮತದಾರರನ್ನು ಸೆಳೆಯಲು ಕಾಂಗ್ರೆಸ್ ಅಭ್ಯರ್ಥಿ ಮೃಣಾಳ ಹೆಬ್ಬಾಳಕರ ಗೆಲ್ಲಿಸಲು ಕೈ ಮುಖಂಡ ಮೋಹನ ಸಾಂಬ್ರೇಕರ ನೇತೃತ್ವದಲ್ಲಿ ಗಣೇಶಪೂರ ಮಹಾಲಕ್ಷ್ಮಿ ನಗರ ಸರಸ್ವತಿ ನಗರದ ಮನೆ ಮನೆಗೆ ತೆರಳಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ ಪೈಪೋಟಿಯಲ್ಲಿ ಪ್ರಚಾರ, ಸಮಾವೇಶ ನಡೆಸುವ ಮೂಲಕ ಗಮನ ಸೆಳೆದಿದ್ದರು. ರಾಷ್ಟ್ರ ಮತ್ತು ರಾಜ್ಯ ಮಟ್ಟದ ನಾಯಕರ ದಂಡೆ ಜಿಲ್ಲೆಯತ್ತ ಹರಿದುಬಂದು ಅಭ್ಯರ್ಥಿಗಳ ಪರ ಮತಯಾಚಿಸಿದ್ದರು. ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳು ನಡೆಸಿದ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬೀಳಲಿದ್ದು, ಇಂದು ಕೈ ಅಭ್ಯರ್ಥಿ ಮೃಣಾಳ ಹೆಬ್ಬಾಳಕರ ಪರವಾಗಿ ಮನೆ ಮನೆಗೆ ಕಾಂಗ್ರೆಸ್ ಮುಖಂಡರು ಪ್ರಚಾರ ಮಾಡಿದರು . ಈ ಸಂದರ್ಭದಲ್ಲಿ ಜೈನುದ್ದೀನ ಮುಜಾವರ, ಕಾಶಿನಾಥ ಸಾಂಬ್ರೇಕರ, ಫ್ರಾನ್ಸಿ ಲೋಬೊ, ರಾಮಾ ಚಂಡೇಕರ ಸೇರಿದಂತೆ ಅನೇಕ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು