ಛಾಪಾ ಕಾಗದ ಹಗರಣದ ರೂವಾರಿ ಕರೀಂಲಾಲ್ ತೆಲಗಿ ವಕೀಲರ ಫ್ಯಾಮಿಲಿಯೊಂದಿಗೆ ಡಬಲ್ ಗೇಮ್ : ತಾಳಿಕೋಟಿ ಆರೋಪ
ನಮ್ಮ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ನಂದಗಡಿ ವಕೀಲರು :ಕರೀಂಲಾಲ್ ಪತ್ನಿ, ಮಗಳು ಆರೋಪ
ಬೆಳಗಾವಿ: ಕರೀಂಲಾಲ್ ತೆಲಗಿ ಕುಟುಂಬದ ವಕೀಲ ಸಾದಿಕ್ ನಂದಗಡಿ ಅವರು ಕರೀಂಲಾಲ್ ಅವರ ಪತ್ನಿ, ಮಗಳು ಮತ್ತು ನನ್ನ ಮೇಲೆ ವಿನಾಕಾರಣ ಪೊಲೀಸ್ ಠಾಣೆಗಳಲ್ಲಿ ಸುಳ್ಳು ದೂರು ಕೊಡುತ್ತಿದ್ದಾರೆ. ಅಲ್ಲದೇ ನನ್ನ ಮೇಲೆ ಹಲ್ಲೆ ಮಾಡಿಸಿದ್ದರೆ ಎಂದು ಕರೀಂಲಾಲ್ ಪುತ್ರಿ ಮತ್ತು ಪತಿ ಇರ್ಫಾನ್ ತಾಳಿಕೋಟಿ ಅವರು ಆರೋಪಿಸಿದ್ದಾರೆ.
ನಗರದ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬದ ಜೊತೆಗೆ ಮತ್ತು ನಮ್ಮ್ ಅಜ್ಜಿ ಷರೀಫಾಬಿ ಲಾಡಸಾಬ್ ತೆಲಗಿ, ಮತ್ತು ವಕೀಲರ್ ತಂದೆ ಖುರ್ಶಿದ್ ನ೦ದಗಡಿ, ಅಣ್ಣ ತಂಗಿಯ ಹಾಗೆ ಅನ್ಯೋನ್ಯ ಸಂಬಂಧ ಹೊಂದಿದ್ದರೂ ಕೂಡ ಯಾಕೆ ಈ ರೀತಿ ಮಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಅಲ್ಲದೇ ಎಸ್.ಕೆ.ನಂದಗಡಿ ಮಾವ ಪೊಲೀಸ್ ಅಧಿಕಾರಿ ಕೂಡ ಕರೀಂಲಾಲ್ ಅವರ ಜೊತೆಗೆ ಬೆಂಗಳೂರಿನಲ್ಲಿ ಆರೋಪಿಯಾಗಿದ್ದು. ಅಲ್ಲದೇ ಮಿರಜಿನಲ್ಲಿರುವ ವಕೀಲನ ಸಂಬಂಧಿಕರು ಕೂಡ ಆರೋಪಿಗಳಾಗಿ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಇವರದ್ದೆಲ್ಲಾ ಒಂದೇ ಟೀಂ ಆಗಿತ್ತು ಮತ್ತು ಸದರಿ ವಕೀಲರು, ನ್ಯಾಯವಾದಿ ವೃತ್ತಿಗೆ ಸೇರುವುದ್ದಕ್ಕಿಂತ್ ಮುಚಿತವಗಿ ಕರೀಂಲಾಲ್ ತೆಲಗಿಯವರ ಕುಟುಂಬದ ಜೊತೆ ಒಡನಾಟ ಹೂಂದಿದ್ದರು, ಅದ್ಕಕಾ ವಿಶ್ವಾಸಿಕ್ ಮನುಷ್ಯ ಅಂತಾ ಕರೀಂಲಾಲ್ ತೆಲಗಿಯವರು ಸದರಿ ವಕೀಲನನ್ನು ತಮ್ಮ ಕುಟುಂಬದ್ ಪರವಾಗಿ ವಕೀಲರು ಅಂತಾ ನೇಮಿಸಿದ್ದರು,
ಛಾಪಾ ಕಾಗದ ಹಗರಣದ ರೂವಾರಿ ಕರೀಂಲಾಲ್ ತೆಲಗಿ ಫ್ಯಾಮಿಲಿ ವಕೀಲ ಎಸ್.ಕೆ.ನಂದಗಡಿ ಅವರು, ತೆಲಗಿ ಕುಟುಂಬದ ವ್ಯವಹಾರ, ಆಸ್ತಿ ಖರೀದಿ ಮತ್ತು ದಾನ ಧರ್ಮ ಸೇರಿದಂತೆ ಪ್ರತಿಯೊಂದನ್ನು ಇವರೇ ನೋಡಿಕೊಳ್ಳುತ್ತಿದ್ದರು.
ಕರೀಂಲಾಲ್ ತೆಲಗಿಯವರ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಬಾಂಬೆ, ಬೆಂಗಳೂರು, ಚೆನ್ನೈ, ಹೈದರಾಬಾದ್ ಖಾನಾಪೂರ್, ಬೆಳಗಾವಿ ಮತ್ತು ವಿಜಯಪುರ (ಬಿಜಾಪುರ್) ಇನ್ನಿತರೆ ಮೆಟ್ರೋಸಿಟಿಗಳಲ್ಲಿದ್ದ ಕಮರ್ಷಿಯಲ್ ಆಸ್ತಿಗಳನ್ನು ಸಿಬಿಐ ಮತ್ತು ಎಸ್ಐಟಿ ಮತ್ತು ಆದಯ್ ತೆರಿಗೆ ಇಲಾಖೆಯವರು ತಮ್ಮ ಸುಪರ್ದಿಗೆ ತೆಗೆದುಕೊಂಡ ಮತ್ತು ಅವರ ಕಣ್ಣಿಗೆ ಬಿಳದ ಮತ್ತು ಖಾನಾಪುರದಲ್ಲಿನ ಆಸ್ತಿಗಳನ್ನು ತಮ್ಮ ತಾಯಿ, ಪತ್ನಿ, ತಮ್ಮ ಮತ್ತು ತಮ್ಮನ ಮಕ್ಕಳ ಹೆಸರುಗಳ ಮೇಲೆ ಇದ್ದಿದ್ದರಿಂದ ಅವು ಅಧಿಕಾರಿಗಳಿಗೆ ಗೊತ್ತಾಗಿರಲಿಲ್ಲ. 2017ರಲ್ಲಿ ಬೆಂಗಳೂರಿನ ಜೈಲಿನಲ್ಲಿ ಕರೀಂಲಾಲ್ ತೆಲಗಿ ಅವರು ಮೃತರಾಗಿದ್ದರು. ಕರೀಂಲಾಲ್ ಅವರು ತಮ್ಮ ಪತ್ನಿ ಮುಂದೆ ನಾನು ಗಳಿಸಿದ ಆಸ್ತಿ ನಿಮಗೆ ಬೇಡವಾದರೆ ಸರ್ಕಾರಕ್ಕೆ ಕೊಡಬೇಕು ಎಂದು ಮಾತು ಕೊಟ್ಟಿದ್ದರು ಮತ್ತು ಅದೇ ಅವರಕೊನೆ ಸೆ ಸಹ ಆಗಿತ್ತು . ಆ ಮಾತಿನಂತೆ ಕರೀಂಲಾಲ್ ಅವರು ಯಾರ್ಯಾರ ಹೆಸರಿನಲ್ಲಿ ಆಸ್ತಿ ಖರೀದಿಸಿದ್ದರೋ ಅವುಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವಂತೆ ಪುನಾ ಸಿಬಿಐ ಕೋರ್ಟಗೆ ಅರ್ಜಿ ಸಲ್ಲಿಸಿದ್ದರು. ಕರೀಂಲಾಲ್ ಅವರ ಪತ್ನಿ ಕೂಡ ಛಾಪಾ ಕಾಗದ ಪ್ರಕರಣದಲ್ಲಿ ಆರೋಪಿ ಆಗಿದ್ದರಿಂದ ಆಸ್ತಿ ವಿವರಗಳನ್ನು ಸಿಬಿಐಗೆ ವಹಿಸಿದ್ದರು ಎಂದು ಇರ್ಫಾನ್ ತಾಳಿಕೋಟಿ ತಿಳಿಸಿದರು.
ಕರೀಂಲಾಲ್ ಅವರ ಸಹೋದರ ಅಜೀಂ ತೆಲಗಿ ಅವರ ಹೆಸರಿನಲ್ಲಿದ್ದ ಖಾನಾಪುರದ ಅಗ್ರಿಕಲ್ಛರಲ್/ಪ್ಲಾಟೆಬಲ್ ಆಸ್ತಿಯನ್ನು ವಕೀಲ ಎಸ್.ಕೆ.ನಂದಗಡಿ ನಕಲಿ ದಾಖಲಾತಿ ಸೃಷ್ಟಿಸಿ ನ್ಯಾಯಾಲಯದ ಮುಂದೆ ಯಾವುದೇ ಸತ್ಯವನ್ನು ಬಿಚ್ಚಿಡದೆ 2013 ರಲ್ಲಿ ಅಜಿಮ್ ತೆಲಗಿ, ಅವರ ಜೊತೆ ಸೇರಿ ಮತ್ತು MCOCA ಕಾನೂನಿ ಅಡಿಯಲ್ಲಿ ಮತ್ತು ಜಾಮಿನಿನ್ ಮೇಲೆ ಇದ್ದ ಆರೊಪಿತ ಅಜಿಂ ಜೋತೆ ಸೇರಿ ಮತ್ತು ಸದರಿ ಅಜಿಮ್ ತೆಲಗಿ ಮೃತರಾದ್ ನಂತರ ಅವರ 2ನೆ ಹೆಂಡತಿಯ ಜೊತೆ ಸೇರಿ ಸುಳ್ಳು ವರಸಾ ಮಾಡಿ ಆಸ್ತಿಯನ್ನೂ ಲಪಟಾಯಿಸಲು ಎಲ್ಲ ತರಹದ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಈ ಕೃತ್ಯದ್ ಬಗ್ಗೆ ನಮಗೆ ಯಾವುದೇ ತರಹದ್ ಮಾಹಿತಿ ಇರಲಿಲ್ಲ. ನ೦ದಗಡಿ ವಕೀಲರು ನಮಗೆ ಏಕೆ ಈ ರೀತಿ ಕಿರುಕುಳ ನಿಡುತ್ತಿದ್ದಾರೆ. ಎಂದು ಈ ವರೆಗೆ ತಿಳಿದು ಬಂದಿಲ್ಲ ಎಂದು ಮಾಹಿತಿ ಕಲೆ ಹಾಕಿದಾಗ 2022 ರಲ್ಲಿ ನಮಗೆ ಈ ಅವ್ಯವಹಾರದ ಬಗ್ಗೆ ನಮಗೆ ತಿಳಿದದ್ದು ಕರೀಂಲಾಲ್ ಆಸ್ತಿಯನ್ನು ಅವರ ಪತ್ನಿ ಸಿಬಿಐಗೆ ವಹಿಸಿದ್ದರಿಂದ ಸಿಟ್ಟಿಗೆದ್ದು ಈ ರೀತಿ ಕಿರುಕುಳ ನೀಡುತ್ತಿದ್ದಾರೆ.ಎಂದು ತಿಳಿದು ಬಂದಿದೆ.
ಈ ಪ್ರಕರಣವನ್ನು ಸಿಬಿಐ ಕೋರ್ಟ್ ನಿಂದ ಅರ್ಜಿ ವಾಪಸ್ಸು ಪಡೆಯಲು ಈ ರೀತಿ ಕಿರುಕುಳ ನೀಡುತ್ತಿದ್ದಾನೆ. ನ೦ದಗಡಿ ವಕೀಲರು ತಮ್ಮ ವೃತ್ತಿ ನಿಯಮ ಉಲಂಗಿಸಿ ಕಾನೂನಿನ ವಿರುದ್ದವಾಗಿ ಹೀಗೆ ನಡೆದುಕೊಳ್ಳುತ್ತಿದ್ದಾರೆ ಎಂದು ಇರ್ಫಾನ್ ತಾಳಿಕೋಳಿ ಕಿಡಿಕಾರಿದ್ದಾರೆ.
ಈ ಪ್ರಕರಣದ ಬಗ್ಗೆ ನಾವು 555 ಪೇಜುಗಳುಳ್ಳ್ ಮತ್ತು 18 ಪುರವೆಗಳಿರುವ ದಾಖಲಾತಿಯ್ನನ್ನು ನಾವು ಕರ್ನಾಟಕ ಬಾರ್ ಕೌನ್ಸಿಲನಲ್ಲಿ ಇಟ್ಟು ದೂರು ನೀಡಿದ್ದೇವೆ ಮತ್ತು ನಮಗೆ ಸಂವಿಧಾನದ್ ಮೇಲೆ ನಂಬಿಕೆ ಇದೆ ಎಂದು ಹೇಳಿದ್ದಾರೆ.