ಹಲ್ಲೆ,ಗಾಯಾಳುಗಳು ಆಸ್ಪತ್ರೆ ದಾಖಲು..!
ಗೋಕಾಕ : ಹೈ ಮಾಸ್ಕ್ ಲೈಟ್ ಕಂಬಕ್ಕೆ ಕಟ್ಟಿದ್ದ ದ್ವಜ ತೆರವುಗೋಳಿಸುವ ವಿಚಾರಕ್ಕಾಗಿ ಎರಡು ಗುಂಪು ನಡುವೆ ಗಲಾಟೆಯಾದ ಘಟನೆ ಗೋಕಾಕ ತಾಲೂಕಿನ ಬೇಟಗೇರಿ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಬರುವ ಎಪ್ರೀಲ್ 14 ರಂದು ಅಂಬೇಡ್ಜರ ಜಯಂತಿ ನಿಮಿತ್ಯ ಹೈ ಮಾಸ್ಕ್ ಲೈಟ ಕಂಭಕ್ಕೆ ಕಟ್ಟಿದ್ದ ಕೇಸರಿ ದ್ವಜ ತೆಗೆಯಲು ತಳವಾರ ಕುಟುಂಬಸ್ಥರು ಹೇಳಿದ್ದಕ್ಕೆ ರಾತ್ರಿ ಗುಂಪು ಕಟ್ಟಿಕೊಂಡು ಬಂದು ದಲಿತ ಕುಟುಂಬದವರ ಮನೆ ಮೇಲೆ ಗಲಾಟೆ ಮಾಡಲಾಗಿದೆ.
ದಲಿತ ಸಮುದಾಯಕ್ಕೆ ಸೇರಿದ ತಳವಾರ ಮನೆಗೆ ನುಗ್ಗಿದ ಗುಂಪು ಮನೆಯಲಿದ್ದ ಪುರುಷ ಮತ್ತು ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾರೆ.ಈ ಘಟನೆಯಲ್ಲಿ ಹಲ್ಲೆಗೊಳಗಾಗಿ ಗಾಯಗೊಂಡ ಎರಡು ಗುಂಪಿನವರು ಗೋಕಾಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ, ಇನ್ನು ಘಟನೆಗೆ ಸಂಬಂದಿಸಿದಂತೆ ಕುಲಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.