ನಿವೃತ್ತ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಎಂಪಿ ಎಲೆಕ್ಷನ ಅಖಾಡಾದಲ್ಲಿ..!
ಜಿಲ್ಲಾಧಿಕಾರಿಗಳಾಗಿ ವಿಭಾಗಾಧಿಕಾರಿಗಳಾಗಿ ಸೇವೆ ಮಾಡಿರುವ ಎಂ.ಜಿ ಹಿರೇಮಠ ಅವರು ಪ್ರಸಕ್ತ ಲೋಕಸಭೆ ಚುನಾವಣೆಯ ಬೆಳಗಾವಿ ಕ್ಷೇತ್ರದ ಬಿಜೆಪಿಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿ ಎಂ.ಜಿ. ಹಿರೇಮಠ ಅವರನ್ನು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಸಂಬಂಧ ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ. ಈ ಹಿಂದೆ ಐಪಿಎಸ್ ಅಧಿಕಾರಿಗಳಾಗಿದ್ದ ಭಾಸ್ಕರ ರಾವ್ ಮತ್ತು. ಅವರಿಗೆ ಬಿಜೆಪಿ ಮಣೆ ಹಾಕಿತ್ತು. ಆದರೆ ಈಗ ಬೆಳಗಾವಿಯ ನಿವೃತ್ತ ಐಎಎಸ್ ಅಧಿಕಾರಿ ಎಂ. ಜಿ. ಹಿರೇಮಠ ಅವರನ್ನು ಸೆಳೆದಿರುವ ಬಿಜೆಪಿ, ಅವರನ್ನು ಲೋಕಸಭಾ ಬೆಳಗಾವಿ ಕ್ಷೇತ್ರದಿಂದ ಕಣಕ್ಕಿಳಿಸಲು ಮುಂದಾಗಿದೆ.
ಎಂ. ಜಿ. ಹಿರೇಮಠ ಅವರು ಬೆಳಗಾವಿ ಜಿಲ್ಲಾಧಿಕಾರಿ ಆಗಿದ್ದ ಅವಧಿಯಲ್ಲಿ ಸಲ್ಲಿಸಿದ ಜನಪರ ಆಡಳಿತ ಜಿಲ್ಲೆಯ ಜನತೆ ಜನ ಪ್ರಿಯತೆಗೆ ಸಾಕ್ಷಿ ಆಗಿತ್ತು. ಅದರಲ್ಲೂ ಕರೋನಾ ಕಷ್ಟ ಕಾಲದಲ್ಲಿ ಹಿರೇಮಠ ಅವರು ಜನರ ಕಷ್ಟಕ್ಕೆ ಸ್ಪಂದಿಸಿದ್ದರು. ಅಲ್ಲದೆ ಬೆಳಗಾವಿ ಪ್ರಾದೇಶಿಕ ಆಯುಕ್ತರಾಗಿಯೂ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು. ಬಳಿಕ ಅವರು ಜಿಲ್ಲೆಯ ಯುವಕರಿಗೆ ಕೆಎಎಸ್, ಐಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುತ್ತ ಬಂದಿದ್ದಾರೆ. ಈಗ ಜನತೆ ಒತ್ತಾಸೆ ಮೇರೆಗೆ ರಾಜಕೀಯ ಸೇರ್ಪಡೆ ಆಗುವ ಮೂಲಕ ಮತ್ತೆ ಜನ ಸೇವೆಗೆ ನಿಂತಿದ್ದಾರೆ. ಆಡಳಿತ ಸೇವೆಯಲ್ಲಿ ಸಾಕಷ್ಟು ಅನುಭವ ಹೊಂದಿರುವ ಎಂ. ಜಿ. ಹಿರೇಮಠ ಅವರು ಜನಪ್ರತಿನಿಧಿ ಆಗಿ ಆಯ್ಕೆ ಆದರೆ ಜನಪರ ಸೇವೆ ನೀಡಲು ಸಾಕಷ್ಟು ಅನುಕೂಲ ಆಗಲಿದೆ. ಹಾಗಾಗಿ ಬಿಜೆಪಿ ನಾಯಕರು ಎಂ.ಜಿ. ಹಿರೇಮಠ ಅವರನ್ನು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆಗಳಿವೆ.