ನಾರಾಯಣಗೌಡ ಸ್ವಾಗತಿಸಲು ಕರವೇ ಕಾರ್ಯಕರ್ತರು ಸಜ್ಜು..!
ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಅಳವಡಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆ ವೇಳೆ ಪೊಲೀಸರರು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ 29 ಕಾರ್ಯಕರ್ತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದ ಪ್ರಕರಣದಲ್ಲಿ ಇಂದು ನಾರಾಯಣಗೌಡ ಸೇರಿ ಕಾರ್ಯಕರ್ತರೆಲ್ಲರೂ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಗಡಿಭಾಗದ ಕರವೇ ಕಾರ್ಯಕರ್ತರು ರಾಜಧಾನಿಗೇ
ಇನ್ನು ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ರಕ್ಷಣಾ ವೇದಿಕೆ ಕಾಯ೯ಕತ೯ರು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯನಗೌಡರ ಬಿಡುಗಡೆ ಸಂಧಭ೯ದಲ್ಲಿ ಪಾಲಗೊಳ್ಳುತ್ತಿದ್ದು ಅದಕ್ಕಾಗಿ ಬೆಳಗಾವಿ ಜಿಲ್ಲೆಯಿಂದ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ನೂರಾರು ಕಾಯ೯ಕತ೯ರು ಇಂದು ಬೆಳಗಾವಿಯಿಂದ ರಾಜಧಾನಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ಅಧ್ಯಕ್ಷ ನಾರಾಯನಗೌಡರ ಜೊತೆ 29 ಜನರು ಬಿಡುಗಡೆ
ಸೆ. 27ರಂದು (ಬುಧವಾರ) ಪ್ರತಿಭಟನೆ ವೇಳೆ ಬಂಧಿಸಿದ್ದ ಪೊಲೀಸರು. ಡಿ. 28ರಿಂದ ಪರಪ್ಪನಗ್ರಹಾರ ಜೈಲಲ್ಲಿದ್ದ ಕರವೇ ನಾರಾಯಣ ಗೌಡ ಸೇರಿ 29ಜನರಿಗೆ ಶನಿವಾರವೇ ಜಾಮೀನು ಮಂಜೂರಾಗಿತ್ತು. ಬಳಿಕ ಜಾಮಿನು ಪ್ರತಿ ಶನಿವಾರ ಸಂಜೆ 7ಗಂಟೆಯ ನಂತರ ಜೈಲಾಧೀಕಾರಿಗಳಿಗೆ ತಲುಪಿತ್ತು. ನಿನ್ನೆ ಭಾನುವಾರ ಆಗಿದ್ದರಿಂದ ಜಾಮೀನು ಪ್ರತಿ ಪರೀಶಿಲನೆ ಸಾಧ್ಯವಾಗಿರಲಿಲ್ಲ. ಇಂದು ನಾರಾಯಣಗೌಡ ಸೇರಿದಂತೆ 29ಜನರ ಜಾಮೀನು ಅರ್ಜಿ ಪರೀಶಿಲಿಸಲಿರುವ ಅಧಿಕಾರಿಗಳು. ಪರೀಶಿಲನೆ ನಂತರ ಜೈಲಿನಿಂದ ಬಿಡುಗಡೆ ಮಾಡಲಿದ್ದರೆ,
ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿ
ನಾರಾಯಣ ಗೌಡ ಬಿಡುಗಡೆ ಹಿನ್ನಲೆ ಹೆಚ್ಚು ಬೆಂಬಲಿಗರು ಸೇರುವ ಸಾಧ್ಯತೆಯಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಲಾಗಿದೆ.