ಬೆಳಗಾವಿಬೆಳಗಾವಿ ನಗರ

ಕಾಡಿನಿಂದ ನಾಡಿಗೆ ಬಂದ ಗಜರಾಜ..! 

ಕಾಡಾನೆ ಕಂಡು ಬೆಚ್ಚುಬಿದ್ದ ಬೆಳಗಾವಿ ಜನತೆ..! 
ಬೆಳಗಾವಿ: ಕಾಡಿನಿಂದ ನಾಡಿಗೆ ಬಂದ ಕಾಡಾನೆಯೊಂದು ಬೆಳಗ್ಗೆ ನಗರದ  ಬಾಕ್ಸೈಟ್ ರೋಡ, ಅಜಮ್ ನಗರ,  ವೈಭವ ನಗರ, ಕಂಗ್ರಾಳಿಯಲ್ಲಿ ಕಾಣಿಸಿಕೊಂಡು ಜನರಲ್ಲಿ  ಆತಂಕ ಸೃಷ್ಟಿಸಿತು.
ಬೆಳಗ್ಗೆ ವಾಯುವಿಹಾರಕ್ಕೆ ಹೋಗುತ್ತಿದ್ದ ಜನ ಮೊದಲು ಆನೆಯನ್ನು ಕಂಡು ಬೆಚ್ಚುಬಿದ್ದಿದ್ದಾರೆ  ಈ ವಿಷಯ ನಗರದಲ್ಲಿ ಹರಡುತ್ತಿದ್ದಂತೆ ಜನ ತಂಡೋಪತಂಡವಾಗಿ ಆಗಮಿಸಿ ಆನೆ ನೋಡಲು ಮುಗಿಬಿದ್ದರು. ಬಹು ಗಂಟೆಗಳ ಕಾಲ ನಗರದಲ್ಲಿ ಸುತ್ತಮುತ್ತ ಸಂಚರಿಸಿದ ಆನೆ ಉಚಗಾವಿ ಕಡೆ ಸಾಗಿತು. ಆನೆಯನ್ನು ಹಿಡಿಯಲು ಅರಣ್ಯಾಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. 
TV24 News Desk
the authorTV24 News Desk

Leave a Reply