ಬೆಳಗಾವಿಬೆಳಗಾವಿ ನಗರ

 ರೈತ ಹೋರಾಟಗಾರರ ನಡುವೆ ಮಾತಿನ ಚಕಮಕಿ.!

ಬೆಳಗಾವಿ: ಕೊಂಡಸಕೊಪ್ಪ ಬಳಿ ರೈತರು ಪ್ರತಿಭಟನೆ ನಡೆಸಿದರು. ಇಂದು ರೈತ ನಾಯಕ ಎಚ್ ಆರ್ ಬಸವರಾಜಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಇದಾಗಿದ್ದು, ಪ್ರತಿಭಟನೆ ವೇಳೆ ರೈತ ನಾಯಕಿ ಮಂಜುಳಾ ಪೂಜಾರಿ ಗರಂ ಆದ ಘಟನೆ ನಡೆದಿದೆ. ಪ್ರತಿಭಟನಾ ಸ್ಥಳದಲ್ಲಿ ಗಲಾಟೆ ಮಾಡಿದ ಮಂಜುಳಾ ಪೂಜಾರಿ ನಂತರ ಪ್ರತಿಭಟನಾ ಸ್ಥಳದಿಂದ ಹೊರ ನಡೆದರು.
ಮಂಜುಳಾ ಪೂಜಾರಿಗೆ ವೇದಿಕೆ ಮೇಲೆ ಅವಕಾಶ ಕಲ್ಪಿಸದಕ್ಕೆ ಬೆಂಬಲಿಗರಿಂದ ಆಕ್ಷೇಪ ವ್ಯಕ್ತವಾಯಿತು. ಇದರಿಂದ ಕೋಪಗೊಂಡ ರೈತನಾಯಕರಿಗೆ ಪ್ರಶ್ನಿಸಿದ ಮಂಜುಳಾ ಪೂಜಾರಿ ಬೆಂಬಲಿಗರು ವಾಗ್ವಾದಕ್ಕಿಳಿದರು. ರೈತ ನಾಯಕ ಬಸವರಾಜಪ್ಪ ಹಾಗೂ ಮಂಜುಳಾ ಪೂಜಾರಿ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ಬೆಂಬಲಿಗರ ಜೊತೆ ಪ್ರತಿಭಟನಾ ಸ್ಥಳದಿಂದ ಹೊರ ನಡೆದ ಮುಂಜುಳಾ ಪೂಜಾರಿ ಪ್ರತ್ಯೇಕವಾಗಿ ಪ್ರತಿಭಟಿಸುವುದಾಗಿ ತಿಳಿಸಿದರು.
TV24 News Desk
the authorTV24 News Desk

Leave a Reply