ಬೆಳಗಾವಿ:ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಚಿನ್ನದ ವ್ಯಾಪಾರಿಯೊಬ್ಬರ ಬಳಿ ಲಂಚ ಸ್ವೀಕರಿಸುತ್ತಿದ್ದ ಆದಾಯ ತೆರಿಗೆ ಅಧಿಕಾರಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ನಾರಾಯಣ ಬರಮಣಿ ಅವರ ಟೀಮ್ ಪೋಲೀಸರು ವಶಕ್ಕೆ ಪಡೆದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಅವಿನಾಶ ಟೋನಪೆ ಎಂಬುವವರು ಖಾಕಿ ಬಲೆಗೆ ಬಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿ, ಚಿಕ್ಕೋಡಿ ತಾಲೂಕಿನ ಅಂಕಲಿಯ ಪರುಶುರಾಮ ಬಂಕಾಪುರ ಎಂಬ ಚಿನ್ನದಂಗಡಿ ಮಾಲೀಕನಿಗೆ ಹಣ ನೀಡುವಂತೆ ಆರೋಪಿ ಅಧಿಕಾರಿ ಅವಿನಾಶ ಟೊನಪೆ ಕಿರುಕುಳ ನೀಡುತ್ತಿದ್ದರು. 10 ಲಕ್ಷ ಹಣಕ್ಕಾಗಿ ಅಧಿಕಾರಿ ಬೇಡಿಕೆ ಇಟ್ಟಿದ್ದಾರೆ. ಇದೀಗ ಹಣ ಪಡೆಯುವಾಗ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದಾರೆ.
ಚಿನ್ನಾಭರಣ ವ್ಯಾಪಾರಿ ಪರಶುರಾಮ ಬಂಕಾಪುರ ಎಂಬ ವ್ಯಕ್ತಿಗೆ ನಿನ್ನದು ಅನಧಿಕೃತ ವ್ಯಾಪಾರ ಇದೆ ಎಂದು 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಖತರನಾಕ ಅಧಿಕಾರಿ. ಹಣ ತಂದು ಕೊಡು ಎಂದು ಪೀಡಿಸುತ್ತಿದ್ದ. ಈ ವಿಷಯವನ್ನ ಕೂಡಲೇ ಪರಶುರಾಮ್ ಮಾರ್ಕೆಟ್ ವಿಭಾಗದ ಎಸಿಪಿ ನಾರಾಯಣ ಭರಮನಿಯವರಿಗೆ ತಿಳಿಸಿದಾಗ ಅವರು ತಮ್ಮ ತಂಡವನ್ನು ಕಳುಹಿಸಿ ಆದಾಯ ತೆರಿಗೆ ಅಧಿಕಾರಿಯನ್ನ ಹಣ ಪಡೆಯುವಾಗಲೇ ಖೆಡ್ಡಾಕೆ ಕೆಡವಿ ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.
ಕಳೆದ ನಾಲೈದು ದಿನಗಳ ಹಿಂದೆ ಅಂಕಲಿಯಲ್ಲಿರುವ ಪರಶುರಾಮ್ ಅವರ ಅಂಗಡಿಗೆ ತಮ್ಮಸಿಬ್ಬಂದಿಗಳೊಂದಿಗೆ ಹೋಗಿದ್ದ ಆದಾಯ ತೆರಿಗೆ ಅಧಿಕಾರಿ ಅವಿನಾಶ ಟೋನಪೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಪರಶುರಾಮ್ ಪೊಲೀಸರಿಗೆ ತಿಳಿಸಿ ಕವರ್ ನಲ್ಲಿ 40 ಸಾವಿರ ಹಣ ಇಟ್ಟಕೊಂಡು ಅವಿನಾಶ ಟೋಣಪೆ ಹೇಳಿದ ಜಾಗಕ್ಕೆ ಹೋಗಿ ನಿಂತಿದ್ಧರು. ಮಪ್ತಿಯಲ್ಲಿದ್ದ ಪೊಲೀಸರು ಟೊಣಪೆ ಹಣ ಪಡೆಯುತ್ತಿದ್ದಂತೆ ಅವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.