ಬೆಳಗಾವಿ

ಕರ್ನಾಟಕ ರಾಜ್ಯ ರೈತ ಸಂಘದಿಂದ ಮಾಲಿಂಗಪುರದಲ್ಲಿ ಸಭೆ ನಡೆಸಲಾಯಿತು

ಮಾಲಿಂಗಪುರ: ಕರ್ನಾಟಕ ರಾಜ್ಯ ರೈತ ಸಂಘದಿಂದ ರಾಜ್ಯ ಸಮಿತಿಯನ್ನು ಮಾಲಿಂಗಪುರದಲ್ಲಿಇಂದು ಸಭೆಯನ್ನು ಜರುಗಿತು. ಹಲವಾರು ರೈತರ ಸಮಸ್ಯೆಗಳನ್ನು ಆಲಿಸಿ  ಮುಂದಿನ ರೂಪರೇಷೆಗಳ  ಬಗ್ಗೆ ಚರ್ಚಿಸಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಎಚ್ಆರ್ ಬಸವರಾಜಪ್ಪನವರು ಬರುವಂತ ದಿನಗಳಲ್ಲಿ ಸಂಘಟನೆಯನ್ನು ಹೇಗೆ ಬಲಪಡಿಸಬೇಕೆಂದು ವಿಚಾರ ವ್ಯಕ್ತಪಡಿಸಿದರು ಮತ್ತು ರಾಜ್ಯ ಉಪಾಧ್ಯಕ್ಷರಾದ ಶಿವಾನಂದ್ ಮುಗಳಿಹಾಳ ಮಾತನಾಡಿ ರೈತನ ನಾಯಕರಿಗೆ ಅಧ್ಯಯನ ಶಿಬಿರ ಮಾಡುವಂತೆ  ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಎಚ್ಆರ್ ಬಸವರಾಜಪ್ಪನವರು ಕಾರ್ಯಾಧ್ಯಕ್ಷರಾದ ಸಿದ್ವೀರಪ್ಪ ಚನ್ನಪ್ಪ ಪೂಜಾರಿ, ರಾಜ್ಯ ಉಪಾಧ್ಯಕ್ಷರಾದ ಶಿವಾನಂದ ಮುಗಳಿಹಾಳ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಬನಿ ಶಿವಪ್ಪ, ಜಿಲ್ಲಾಧ್ಯಕ್ಷರಾದಂತ ರಾಘವೇಂದ್ರ ನಾಯಕ್,  ರಾಜು ಪವಾರ್ ಗಂಗಾಧರ್ ಮೇಟಿ ಹಾಗೂ ಇನ್ನೂ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.

TV24 News Desk
the authorTV24 News Desk

Leave a Reply