ದಾವಣಗೆರೆ: ನಗರದ ಶಿವಯೋಗಿ ಮಂದಿರದಲ್ಲಿ ಹಡಪದ ಅಪ್ಪಣ್ಣಶ್ರೀ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮಿಗಳು ಸರ್ಕಾರಿ ಬಸ್ಸುಗಳಿಗೆ ಕಲ್ಲು ಹೊಡೆಯಿರಿ, ನಿಮ್ಮ ಸೌಲಭ್ಯಗಳನ್ನು ಪಡೆಯಿರಿ ಎಂಬ ಪ್ರಚೋದನಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ದಾವಣಗೆರೆಯ ಅನ್ನದಾನಿ ಬಸವಪ್ರಿಯ ಹಡಪದ ಅಪ್ಪಣ್ಣಶ್ರೀಗಳು ಇಂತಹ ಪ್ರಚೋದನಾತ್ಮಕ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ.
ಕಾರ್ಯಕ್ರಮದಲ್ಲಿ ಮೀಸಲಾತಿ ಕುರಿತು ಮಾತನಾಡಿದ ಅವರು ಲಿಂಗಾಯತ ಹಡಪದ ಅಂತ ಇದ್ದರೆ ಮೀಸಲಾತಿ 3ಬಿ ಯಲ್ಲಿ ಸಿಗುತ್ತದೆ. ಹಿಂದೂ ಹಡಪದ ಅಂತ ಇದ್ದರೆ ಮೀಸಲಾತಿ 2ಎ ನಲ್ಲಿ ಸಿಗುತ್ತದೆ. ಆದರೆ ನಮ್ಮ ದಾಖಲಾತಿಗಳು ಲಿಂಗಾಯತ ಹಡಪದ ಎಂದೆ ಇವೆ. ಹೀಗಾಗಿ ಹಡಪದ ಸಮಾಜ ಮೀಸಲಾತಿಯಿಂದ ವಂಚಿತವಾಗಿದ ಎಂದರು. ಇದಕ್ಕಾಗಿ ನಾವೆಲ್ಲರೂ ಹೋರಾಟ ಮಾಡಬೇಕು, ಎಲ್ಲರೂ ಸಂಘಟಿತರಾಗಬೇಕು ಎಂದು ದಾವಣಗೆರೆಯಲ್ಲಿ ಅಪ್ಪಣ್ಣ ಶ್ರೀ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ.