ಕಿತ್ತೂರು : ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದು 32 ವರ್ಷದ ವ್ಯಕ್ತಿಯ ಕೊಲೆಯಾಗಿದೆ. ಹತ್ಯೆಯಾದವ ವಿಜಯ ರಾಮಚಂದ್ರ ಅರೇರೆ ಎಂದು ಗುರುತಿಲಾಗಿದೆ. ಮೃತ ವಿಜಯ ಆರೇರ್ ಜೊತೆ ಕಲ್ಲಪ್ಪ ಕ್ಯಾತನವರ ಮಾತಿನ ಚಕಮಕಿ ಬೆಳೆದು ವಿಕೋಪ ತಿರುಗಿ ಒಬ್ಬರ ಮೇಲೊಬ್ಬರು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ತೀವ್ರ ಗಾಯಗೊಂಡ ವಿಜಯನನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರವಾನಿಸುವ ವೇಳೆ ಮೃತ ಪಟ್ಟಿದ್ದಾನೆ
ಕಲ್ಲಪ್ಪ ಕ್ಯಾತನವರಗೆ ಕಿವಿ ಮತ್ತು ಹಿಂಭಾಗ ಗಾಯವಾಗಿದ್ದು ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.