ಮೊರಾರ್ಜಿದೇಸಾಯಿ ವಸತಿ ಶಾಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್, ಪಾರ್ಸಿ ವಿದ್ಯಾರ್ಥಿಗಳಿಗೆ ಶೇ.75%ರಷ್ಟು ಮತ್ತು ಇತರೆ ವರ್ಗಗಳ ವಿದ್ಯಾರ್ಥಿಗಳಿಗೆ ಶೇ.25%ರಷ್ಟು ಸ್ಥಾನ ಮೀಸಲಿರಿಸಲಾಗಿದೆ.
ಆದರೆ ಮೊರಾರ್ಜಿದೇಸಾಯಿ ವಸತಿ ಶಾಲೆಗಳಿಗೆ ಪ್ರವೇಶ ಪಡೆಯಲು ಸರ್ಕಾರ ಪ್ರವೇಶ ಪರೀಕ್ಷೆಯನ್ನು ನಡೆಸುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣವಾದ ವಿದ್ಯಾರ್ಥಿಗಳನ್ನು ಪ್ರತಿ ಶಾಲೆಗೆ 50 ವಿದ್ಯಾರ್ಥಿಗಳಂತೆ ಪ್ರವೇಶ ನೀಡಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಮೊರಾರ್ಜಿದೇಸಾಯಿ ವಸತಿ ಶಾಲೆಗಳಲ್ಲಿ ಪ್ರವೇಶಾತಿಯು ಈಗ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ನುಂಗಲಾರದ ತುತ್ತಾಗುತ್ತಿದೆ. ಪ್ರವೇಶಗಳು ಬಡ ಮಕ್ಕಳಿಗೆ ದೊರೆಯದೇ ಯಾರು ಹೆಚ್ಚು ಶಿಪಾರಸ್ಸು ತರುತ್ತಾರೋ ಅವರಿಗೆ ಪ್ರವೇಶಾತಿ ನೀಡಬೇಕಾದ ಪರಿಸ್ಥಿತಿ ಒತ್ತಡದಲ್ಲಿ ಜಂಟಿ ನಿರ್ದೇಶಕರು ಕೆಲಸ ನಿರ್ವಹಿಸುತ್ತಿದ್ದಾರೆ.
ಸ್ಥಳೀಯ ಸಂಘಟನೆಗಳು, ರಾಜಕೀಯ ವ್ಯಕ್ತಿಗಳು, ಮಧ್ಯವರ್ತಿಗಳು ಜಂಟಿ ನಿರ್ದೇಶಕರಿಗೆ ಒತ್ತಡ ಹೇರುತ್ತಿದ್ದು. ಜಂಟಿ ನಿರ್ದೇಶಕರಿಗೆ ಉಳಿದ ಕೆಲಸಗಳನ್ನು ನಿರ್ವಹಿಸಲು ಕಷ್ಟವಾಗುತ್ತಿದೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದು ಪ್ರವೇಶವನ್ನು ಪಡೆದ ವಿದ್ಯಾರ್ಥಿಗಳ ಸಂಖ್ಯೆ ಅನೇಕ ಇವರಿಂದ ವಸತಿಶಾಲೆಗಳನ್ನು ನಿರ್ವಹಿಸುವುದು ಪ್ರಾಂಶುಪಾಲರಿಗೂ ಹಾಗೂ ನಿಯಲಪಾಲಕರಿಗೂ ಕಷ್ಟವಾಗುತ್ತಿದ್ದು ಜೊತೆ ವಿದ್ಯಾರ್ಥಿಗಳೂ ಕಷ್ಟವನ್ನು ಅನುಭವಿಸುತ್ತಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಬೆಳಗಾವಿಯ ಜಂಟಿ ನಿರ್ದೇಶಕರಾದ ಲಕ್ಷ್ಮಣ ಬಬಲಿಯವರು ಒತ್ತಡದಲ್ಲಿ ಕೆಲಸ ಮಾಡುತ್ತಿರುವುದಂತೂ ಸ್ಪಷ್ಟವಾಗಿ ಗೋಚರವಾಗುತ್ತದೆ. ಆ ಒತ್ತಡದಲ್ಲಿಯೂ ನಮ್ಮ ಲಕ್ಷ್ಮಣ ಬಬಲಿಯವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂತಹ ದಕ್ಷ ಅಧಿಕಾರಿಗೆ ಎಲ್ಲರು ಸಹಕರಿಸಿ ಇಲಾಖೆಯಲ್ಲಿ ಇವರು ಇನ್ನು ಒಳ್ಳೆಯ ಹುದ್ದೆ ಅಲಂಕರಿಸಲಿ ಎಂಬುವುದು ಬೆಳಗಾವಿ ಜನರ ಆಸೆ.