ರಾಯಬಾಗ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಿನ್ನೆ ತಡರಾತ್ರಿ ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನದಿ – ಇಂಗಳಗಾಂವ ಗ್ರಾಮದ ಮೃತ ಯೋಧ ಲಕ್ಷ್ಮಣ ಘೋರ್ಪಡೆ (೨೪) ಎಂದು ಗುರುತಿಸಲಾಗಿದೆ.
ಕಳೆದ ವಾರದ ಹಿಂದೆ ರಜೆಗೆಂದು ಸ್ವಗ್ರಾಮಕ್ಕೆ ಆಗಮಿಸಿದ ಯೋಧ, ದ್ವಿಚಕ್ರ ವಾಹನ ಮೇಲೆಯೇ ಪಕ್ಕದ ಗೋವಾ ರಾಜ್ಯಕ್ಕೆ ಸಂಬಂಧಿಕ ಸತೀಶ್ ಘೋರ್ಪಡೆ ಜೊತೆಗೂಡಿ ಪ್ರವಾಸಕ್ಕೆ ತೆರಳಿದರು, ಪ್ರವಾಸ ಮುಗಿಸಿಕೊಂಡು ಊರಿಗೆ ಬರುವಾಗ ರಾಯಭಾಗ ತಾಲೂಕಿನ ಹಾರುಗೇರಿ ಸಮೀಪದಲ್ಲಿ ಗೋಕಾಕ್ ಅಥಣಿ ರಸ್ತೆಯಲ್ಲಿ ಬೈಕ್ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ, ಸ್ಥಳದಲ್ಲೇ ಯೋದ ಮೃತಪಟ್ಟರೆ ಹಿಂಬದಿ ಸವಾರ ಸತೀಶ್ ಗಂಭೀರ ಗಾಯಗೊಂಡು ಅವರನ್ನು ಮಹಾರಾಷ್ಟ್ರ ಮೀರಜ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.