ಕೊಪ್ಪಳಬಳ್ಳಾರಿರಾಯಿಚೂರು

ಟೈರ್ ಬ್ಲಾಸ್ಟ್ ಹೊತ್ತಿ ಉರಿದ ಬಸ್..!

ನಿದ್ರೆಯಲ್ಲಿದ್ದ 60 ಪ್ರಯಾಣಿಕರಿಗೆ ಏನಾಯ್ತು?
ವಿಜಯನಗರ:  ಚಲಿಸುತ್ತಿದ್ದ ವೇಳೆ ಖಾಸಗಿ ಬಸ್‍ನ ಟೈರ್ ಸ್ಪೋಟದಿಂದ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿರುವ ಘಟನೆ ಇಂದು ಸೋಮವಾರ ಮುಂಜಾನೆ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಸಂಭವಿಸಿದೆ.
 
ಖಾಸಗಿ ಬಸ್ ಕಳೆದ ರಾತ್ರಿ ಬೆಂಗಳೂರಿನಿಂದ ಹಟ್ಟಿ ಚಿನ್ನದಗಣಿಯ ಕಡೆ ಬರುತ್ತಿತ್ತು, ಸುಮಾರು 60 ಜನ ಪ್ರಯಾಣಿಕರು ಅದರಲ್ಲಿದ್ದರು ಮುಂಜಾನೆ 4 ಗಂಟೆ ಸಮಯದಲ್ಲಿ ಬಸ್‍ನ ಟೈಯರ್ ಸ್ಪೋಟಗೊಂಡಿದೆ ತಕ್ಷಣ ಚಾಲಕ ಬಸ್ ನಿಲ್ಲಿಸಿದ್ದಾನೆ.
ಚಾಲಕನ ಸಮಯ ಪ್ರಜ್ಞೆಯಿಂದ ಅದೃಷ್ಟವಷಾತ್ ಪ್ರಯಾಣಿಕರು ಪ್ರಾಣಾಪಯಾದಿಂದ ಪಾರಾಗಿದ್ದಾರೆ ಆದರೆ ಬೆಂಕಿ ಹೊತ್ತುಕೊಂಡಿದೆ ಬಸ್ ಸಂಪೂರ್ಣ ಹೊತ್ತಿಹುರಿದೆ. ಕಾನಾಹೊಸಳ್ಳಿ ಪಿಎಸ್‍ಐ ಎರಿಯಪ್ಪ ನೇತೃತ್ವದಲ್ಲಿ ಎರಡು ಅಗ್ನಿಶಾಮಕ ವಾಹನಗಳ ಸ್ಥಳಕ್ಕೆ ಬೇಟಿ ನೀಡಿ ಬೆಂಕಿ ನಂದಿಸಲಾಗಿದೆ. ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TV24 News Desk
the authorTV24 News Desk

Leave a Reply