ಬೆಳಗಾವಿ

ಡೆಂಗ್ಯೂ ಜ್ವರ ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವು..! 

ನಿಪ್ಪಾಣಿ : ಪ್ರಗತಿನಗರದ ಯುವಕನೋರ್ವ ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಮೃತಪಟ್ಟ ಘಟನೆ ನಡೆದಿದೆ.

ಸೌರಭ್ ರಾಜು ಮಾನೆ (26) ಮೃತಪಟ್ಟ ಯುವಕ.
ಎಂಟು ದಿನಗಳ ಹಿಂದೆ ಜ್ವರದ ಕಾರಣದಿಂದಾಗಿ ರಕ್ತದ ಪ್ಲೇಟ್ಲೆಟ್ ಕಡಿಮೆಯಾದ ಕಾರಣ ಸೌರಭ ಅವರನ್ನು ಕೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಮೃತ ಸೌರಭಗೆ ಮೂರು ತಿಂಗಳ ಹಿಂದೆ ಮದುವೆಯಾಗಿತ್ತು. ಸೌರಭ ಸಾವನ್ನಪ್ಪಿದ ವಿಷಯ ತಿಳಿಯುತ್ತಿದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು‌ ‌ಮುಟ್ಟಿತ್ತು

TV24 News Desk
the authorTV24 News Desk

Leave a Reply