ಚಿಕ್ಕೋಡಿ ಹಲವು ಮನೆಗಳಿಗೆ ಕನ್ನ ಹಾಕಿದ್ದ ಇಬ್ಬರು ಕಳ್ಳರನ್ನು ಬಂಧಿಸಿರುವ ಖಡಕಲಾಟ ಪೊಲೀಸರು ಬಂಧಿತರಿಂದ 12.49 ಲಕ್ಷ ರೂ ಮೌಲ್ಯದ ಚಿನ್ನಾಭರಣ ಮತ್ತು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಅಕ್ಷಯ ನಾರೆ ಹಾಗೂ ಅದಿತ್ಯಾ ಶ್ರೀಪನ್ನವರ ಬಂಧಿತ ಆರೋಪಿಗಳು. ಸೆಪ್ಟೆಂಬರ್ 3ರಂದು ಧೀರಜ ಎಂಬುವವರು ಖಡಕಲಾಟ ಠಾಣೆಗೆ ಬಂದುಮನೆ ಕಳ್ಳತನವಾಗಿರುವ ಕುರಿತು ದೂರು ನೀಡಿದ್ದರು. ಸದರಿ ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು ಪಟ್ಟಣಕುಡಿ, ನವಹಾಳ ಮತ್ತು ನಿಲ್ದಾಣಿ ಸಾಯಿ ಶಂಕರ ನಗರದಲ್ಲಿ ಆದ ಮೂರು ಮನೆ ಕಳ್ಳತನದ ಪ್ರಕರಣಗಳನ್ನು ಭೇದಿಸಿ ಇಬ್ಬರೂ ಆರೋಪಿತರನ್ನು ಬಂಧಿಸಿದ್ದಾರೆ.
ಬಂಧಿತರ ಬಳಿ ಇದ್ದ 111,46,750 ರೂ. ಮೌಲ್ಯದ 208.5 ಗ್ರಾಂ ಬಂಗಾರದ ಆಭರಣಗಳು, 53,200 ರೂ. ಮೌಲ್ಯದ 760 ಗ್ರಾಂ ತೂಕಿನ ಬೆಳ್ಳಿಯ ವಸ್ತುಗಳು ಕಳ್ಳತನಕ್ಕೆ ಉಪಯೋಗಿಸಿದ ಬೈಕ್ ಸೇರಿದಂತೆ ಒಟ್ಟು 12,49.950 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.