ಬೆಳಗಾವಿ : ವಿಶೇಷ ಚೇತನನ ಮೇಲೆ ದರ್ಪ ಮೆರೆದ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಮಾಧ್ಯಮದವರ ವರದಿ ಹಿನ್ನಲೆ ಎಚ್ಚೆತ್ತಗೊಂಡ ಬೆಳಗಾವಿ ಪೊಲೀಸ್ ಆಯುಕ್ತ ಎಸ್.ಎನ್ ಸಿದ್ದರಾಮಪ್ಪ ಮೂವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಮೃಗಗಳಂತೆ ವರ್ತಿಸಿದ ಉದ್ಯಮಭಾಗ ಪಿಎಸ್ಐ ಸರ್ದಾರ ಮುತ್ತಟ್ಟಿ, ಪೇದೆಗಳಾದ ಮಲ್ಲಪ್ಪ ಪೂಜಾರಿ, ಎಸ್.ಆರ್ ಮೇತ್ರಿ ಅಮಾನತಾದವರು. ನಿನ್ನೆ ಇವರ ವರ್ತನೆಗೆ ಶಾಸಕ ಅಭಯ ಪಾಟೀಲ್ ಖಂಡಿಸಿದ್ದರು.
ಕಳೆದ ಮಂಗಳವಾರ ರಾತ್ರಿ ಊಟ ತರಲು ಹೋದ ವಿಶೇಷ ಚೇತನನ ಮೇಲೆ ಪೊಲೀಸರು ದರ್ಪ ಮೆರೆದಿದ್ದರು. ವಿಶೇಷ ಚೇತನ ನಿರಂಜನ ಚೌಗಲೇ ಈ ಕುರಿತು ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಅಮಾನತು ಮಾಡಲಾಗಿದೆ.